Advertisement

Odisha: ಕೋಣೆಯೊಳಗೆ ಹಾವು ಬಿಟ್ಟು ಪತ್ನಿ, ಮಗುವನ್ನು ಸಾಯಿಸಿದ ವ್ಯಕ್ತಿಯ ಬಂಧನ

12:43 PM Nov 24, 2023 | Team Udayavani |

ಭುವನೇಶ್ವರ: ಪತ್ನಿ ಮತ್ತು ತನ್ನ ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.

Advertisement

ಆರೋಪಿ ಕೆ ಗಣೇಶ್ ಪಾತ್ರ ಬಂಧಿತ ಆರೋಪಿ.

ಘಟನೆ ವಿವರ: ಅಕ್ಟೋಬರ್‌ 7 ರಂದು ಗಣೇಶ್‌ ಅವರ ಪತ್ನಿ ಹಾಗೂ ಎರಡು ವರ್ಷದ ಮಗುವಿಗೆ ಹಾವು ಕಚ್ಚಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಮೃತಪಟ್ಟಿದ್ದರು. ಆರಂಭದಲ್ಲಿ ಇದು ಹಾವು ಕಡಿತದಿಂದ ಸಂಭವಿಸಿದ ಅಸ್ವಾಭಾವಿಕ ಸಾವು ಎಂದು ಪೊಲೀಸರು ಪರಿಗಣಿಸಿದ್ದರು.

ಆದರೆ ಈ ಸಂಬಂಧ ಮಾವ ಗಣೇಶ್‌ ವಿರುದ್ಧ ಎಫ್‌ ಐಆರ್‌ ದಾಖಲಿಸಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗಣೇಶ್‌ ಪಾತ್ರನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದಾಗ, ಆರೋಪಿ ಕೊಲೆ ಮಾಡಿರುವ ಸತ್ಯವನ್ನು ಬಾಯಿಬಿಟ್ಟಿದ್ದಾನೆ.

Advertisement

ಕಳೆದ ಕೆಲ ಸಮಯದಿಂದ ಗಣೇಶ್‌ ಹಾಗೂ ಪತ್ನಿ ನಡುವೆ ಕಲಹ ಉಂಟಾಗುತ್ತಿತ್ತು. ಕೌಟುಂಬಿಕ ಕಲಹ ಹೆಚ್ಚಾದ ಬೆನ್ನಲ್ಲೇ ಪತ್ನಿ, ಮಗುವನ್ನು‌ ಕೊಲ್ಲುವ ಯೋಜನೆಯನ್ನು ಹಾಕಿದ್ದ. ಹಾವಾಡಿಗನಿಂದ ಹಾವೊಂದನ್ನು ತಂದು ಪತ್ನಿ, ಮಗು ಮಲಗುವ ಕೋಣೆಯೊಳಗೆ ಬಿಟ್ಟಿದ್ದಾನೆ. ಇದರಿಂದ ಹಾವು ಕಚ್ಚಿದ ಪರಿಣಾಮ ಇಬ್ಬರು ಸಾವಿಗೀಡಾದ್ದಾರೆ. ಕುಟುಂಬಸ್ಥರು ಮೊದಲು ಹಾವನ್ನು ಸಾಯಿಸಿ ಬಳಿಕ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ‌ ಆರೋಪಿಯನ್ನು ಬಂಧಿಸಿ ಇನ್ನಷ್ಟು ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next