Advertisement

ಕಂಠೀರವ ಸ್ಟುಡಿಯೊದಲ್ಲಿ ಅಂಬರೀಶ್‌  ಅಂತ್ಯಕ್ರಿಯೆಗೆ ಆಕ್ಷೇಪ

05:31 PM Nov 25, 2018 | Team Udayavani |

ಬೆಂಗಳೂರು: ಕಂಠೀರವ ಸ್ಟುಡಿಯೊದಲ್ಲಿ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ  ಅಂತ್ಯಕ್ರಿಯೆ ನಡೆಸಿ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಆಕ್ಷೇಪ ಕೇಳಿ ಬಂದಿದೆ. 

Advertisement

ಹೈಕೋರ್ಟ್ನ ವಕೀಲರಾಗಿರುವ ಆರ್.ಎಲ್.ಎನ್ ಮೂರ್ತಿ ಅವರು ರಾಜ್ಯಪಾಲರು ಹಾಗೂ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದ್ದು, ಸ್ಟುಡಿಯೊ ಇರುವುದು ಚಲನಚಿತ್ರ ಚಟುವಟಿಕೆಗಳನ್ನು ನಡೆಸಲು‌. ಚಿತ್ರರಂಗದವರ ಅಂತ್ಯಕ್ರಿಯೆಗೆ ಸ್ಟುಡಿಯೊ ಜಾಗ ಬಳಕೆ ನಿರ್ಧಾರ ಸಾರ್ವಜನಿಕ ಹಿತದೃಷ್ಟಿಯಿಂದ ಸರಿಯಲ್ಲ’ ಎಂದು ಮನವಿಯಲ್ಲಿ ಹೇಳಿದ್ದಾರೆ.

ಕೋರ್ಟ್‌ಗೂ ಅರ್ಜಿ ಸಲ್ಲಿಸಿರುವ ಬಗ್ಗೆ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. 

Advertisement

ಕಂಠೀರವ ಸ್ಟುಡಿಯೋದಲ್ಲಿ  ಡಾ.ರಾಜ್‌ ಅವರ ಸಮಾಧಿಯ ಎದುರುಗಡೆ ಇರುವ ಸರಕಾರಿ ಜಾಗದಲ್ಲಿ ಅಂಬರೀಶ್‌ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿ ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next