Advertisement

Bihar: ಸಾಮೂಹಿಕ ಅ*ತ್ಯಾಚಾರಕ್ಕೆ ಯತ್ನ-ವೈದ್ಯನ ಖಾಸಗಿ ಅಂಗ ಕತ್ತರಿಸಿ ಬಚಾವ್‌ ಆದ ನರ್ಸ್!

12:08 PM Sep 13, 2024 | Team Udayavani |

ಪಾಟ್ನಾ: ನರ್ಸ್‌(Nurse) ಮೇಲೆ ಸಾಮೂಹಿಕ ಅ*ತ್ಯಾಚಾರ ನಡೆಸಲು ಯತ್ನಿಸಿದ ವೇಳೆ ದಿಢೀರನೆ ಹರಿತವಾದ ಬ್ಲೇಡ್‌ ನಿಂದ ವೈದ್ಯನ ಖಾಸಗಿ ಅಂಗವನ್ನು ಕತ್ತರಿಸುವ ಮೂಲಕ ಅಪಾಯದಿಂದ ಪಾರಾದ ಘಟನೆ ಬಿಹಾರದ ಆಸ್ಪತ್ರೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಪಶ್ಚಿಮಬಂಗಾಳದ ಆರ್‌ ಜಿ ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಟ್ರೈನಿ ವೈದ್ಯೆ ಮೇಲಿನ ಅ*ತ್ಯಾಚಾರ ಮತ್ತು ಹ*ತ್ಯೆ ಪ್ರಕರಣ ನಡೆದು ಒಂದು ತಿಂಗಳ ನಂತರ ಬಿಹಾರದಲ್ಲಿ ಈ ಘಟನೆ ನಡೆದಿದೆ.

ಅ*ತ್ಯಾಚಾರ ಪ್ರಕರಣದಲ್ಲಿ ವೈದ್ಯನೊಬ್ಬ ಭಾಗಿಯಾಗಿದ್ದು, ಈತ ಸಮಷ್ಠಿಪುರ್‌ ಜಿಲ್ಲೆಯ ಆರ್‌ ಬಿಎಸ್‌ (RBS) ಹೆಲ್ತ್‌ ಕೇರ್‌ ಸಂಟರ್‌ ನ ಅಡ್ಮಿನಿಸ್ಟ್ರೇಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಆಸ್ಪತ್ರೆಯಲ್ಲಿ ನರ್ಸ್‌ ತನ್ನ ಕೆಲಸ ಮುಗಿಸಿ ಮನೆಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದ ವೇಳೆ  ಕುಡಿದ ಅಮಲಿನಲ್ಲಿದ್ದ ಡಾ.ಸಂಜಯ್‌ ಕುಮಾರ್‌ ಮತ್ತು ಅತನ ಇಬ್ಬರು ಸಹಾಯಕ ವೈದ್ಯರು ಆಕೆಯ ಮೇಲೆ ಅ*ತ್ಯಾಚಾರ ಎಸಗಲು ಮುಂದಾಗಿದ್ದರು. ಆಗ ನರ್ಸ್‌ ಬ್ಲೇಡ್‌ ನಿಂದ ವೈದ್ಯನ ಖಾಸಗಿ ಅಂಗವನ್ನು ಕತ್ತರಿಸಿದ ನಂತರ ಕಾಮುಕರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಆಸ್ಪತ್ರೆಯಿಂದ ಹೊರ ಬಂದ ನಂತರ ನರ್ಸ್‌ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಅದರಂತೆ ಆಸ್ಪತ್ರೆಗೆ ದೌಡಾಯಿಸಿದ ಪೊಲೀಸರು,  ಡಾ. ಕುಮಾರ್‌ ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮತ್ತಿಬ್ಬರು ಆರೋಪಿಗಳಾದ ಡಾ.ಅವಧೇಶ್‌ ಕುಮಾರ್‌ ಮತ್ತು ಡಾ.ಸುನೀಲ್‌ ಕುಮಾರ್‌ ಗುಪ್ತಾನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next