Advertisement

ಬುಲಂದ್‌ಶಹರ್‌ ಹಿಂಸೆ: ಬಂಧಿತ 7 ಮಂದಿ ವಿರುದ್ಧ ಎನ್‌ಎಸ್‌ಎ

12:19 PM Jan 14, 2019 | udayavani editorial |

ಬುಲಂದ್‌ಶಹರ್‌, ಉ.ಪ್ರ : ಬುಲಂದ್‌ಶಹರ್‌ ಜಿಲ್ಲೆಯ ಸಿಯಾನಾ ತೆಹಶೀಲ್‌ ನಲ್ಲಿ ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ  ಗೋ ಹತ್ಯೆಯನ್ನು ಆರೋಪಿಸಿ ಭುಗಿಲೆದ್ದಿದ್ದ ಹಿಂಸಾ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಏಳು ಮಂದಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು (ಎನ್‌ಎಸ್‌ಎ) ಬುಲಂದ್‌ಶಹರ್‌ ಜಿಲ್ಲಾಡಳಿತ ಇಂದು ಸೋಮವಾರ ಅನ್ವಯಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸಿಯಾನಾದ ಮಾಹಾವ್‌ ಗ್ರಾಮದಲ್ಲಿ ಗೋವಿನ ಶವ ಪತ್ತೆಯಾದುದನ್ನು ಅನುಸರಿಸಿ ಕಳೆದ ಡಿ.3ರಂದು ಉದ್ರಿಕ್ತ ಜನಸಮೂಹ ಸ್ಥಳೀಯ ಶಿಂಗ್ರಾವತಿ ಪೊಲೀಸ್‌ ಠಾಣೆಯ ಮೇಲೆ ದಾಳಿ ನಡೆಸಿತ್ತು.

ಈ ದಾಳಿಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ (44) ಮತ್ತು ಪೌರ ತರುಣ ಸುಮೀತ್‌ ಕುಮಾರ್‌ (20) ಅವರನ್ನು  ಹೊಡೆದು, ಚಚ್ಚಿ  ಕೊಲ್ಲಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next