Advertisement

ಮಂಗಳೂರಿನ ಎಲ್ಲಾ ಮಲಯಾಳಿ ವಿದ್ಯಾರ್ಥಿಗಳು ತಕ್ಷಣ ಹಾಸ್ಟೆಲ್ ಬಿಟ್ಟು ತೆರಳಿ: ಸೂಚನೆ

10:16 AM Dec 23, 2019 | keerthan |

ಮಂಗಳೂರು: ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕೇರಳ ಮೂಲದ ವಿದ್ಯಾರ್ಥಿಗಳು ಕೂಡಲೇ ತವರಿಗೆ ತೆರಳುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚನೆ ನಿಡಿದ್ದಾರೆ ಎಂದು ವರದಿಯಾಗಿದೆ.

Advertisement

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಲು ಕೇರಳ ಮೂಲದವರು ಕಾರಣ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೇರಳ ಸರಕಾರ ಈ ಕ್ರಮ ಕೈಗೊಂಡಿದೆ.

ಮಂಗಳೂರಿನಲ್ಲಿರುವ ಎಲ್ಲಾ ಮಲಯಾಳಿ ವಿದ್ಯಾರ್ಥಿಗಳು ತಕ್ಷಣ ಹಾಸ್ಟೆಲ್ ಬಿಟ್ಟು ತವರಿಗೆ ಬರಬೇಕು. ನಗರದಲ್ಲಿ ಪರಿಸ್ಥಿತಿ ತಿಳಿಯಾದ ಮೇಲೆ ಮರಳಿ ಹೋಗಬಹುದು ಎಂದು ಕೇರಳ ಸರಕಾರ ತಿಳಿಸಿದೆ.

ವಿದ್ಯಾರ್ಥಿಗಳು ತವರಿಗೆ ಮರಳಲು ಕೇರಳ ಸರಕಾರ ಐದು ಬಸ್ ಗಳನ್ನೂ ಶುಕ್ರವಾರ ಕಳುಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next