Advertisement

ನಿಯಮಾವಳಿ ಪಾಲಿಸಲು ಬಸ್‌ ಮಾಲಕರಿಗೆ ಸೂಚನೆ

11:33 PM Jun 05, 2024 | Team Udayavani |

ಉಡುಪಿ: ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಉಡುಪಿ ಸಿಟಿ ಬಸ್‌ ಮಾಲಕರು ಮತ್ತು ಸರ್ವಿಸ್‌ ಬಸ್‌ ಮಾಲಕರ ಸಭೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ನಡೆಯಿತು. ಸಂಚಾರ ಪೊಲೀಸ್‌ ಠಾಣೆ ಉಪ ನಿರೀಕ್ಷಕ ಸುದರ್ಶನ್‌ ದೊಡ್ಡಮನಿ ಅವರು ಬಸ್‌ ಮಾಲಕರನ್ನು ಉದ್ದೇಶಿಸಿ ಕಾನೂನು ನಿಯಮಗಳನ್ನು ಪಾಲಿಸುವ ಬಗ್ಗೆ ಸೂಚನೆ ನೀಡಿದರು.

Advertisement

ಕರ್ಕಶ ಹಾರ್ನ್ಗಳನ್ನು ಜೂ.15ರ ಒಳಗೆ ತೆರವುಗೊಳಿಸಬೇಕು. ಟೇಪ್‌ರೆಕಾರ್ಡ್‌, ಸ್ಪೀಕರ್‌ ತೆಗೆಯಬೇಕು, ಸಿ.ಸಿ. ಕೆಮರಾ ಅಳವಡಿಸುವುದು. ನಿಗದಿತ ವೇಳಾಪಟ್ಟಿಯಂತೆ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಚಲಾಯಿಸುವುದು. ಕರಾವಳಿ ಜಂಕ್ಷನ್‌ನಲ್ಲಿ ಬಸ್‌ ನಿಲ್ದಾಣಕ್ಕೆ ಹೋಗದೇ ದಾರಿಯಲ್ಲಿ ಪಿಕ್‌ ಆಪ್‌ ಮಾಡುವುದರಿಂದ ಸಾರ್ವಜನಿಕರಿಗೆ ಮತ್ತು ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರಿಂದ ಚಾಲಕರು ಬಸ್‌ ನಿಲ್ದಾಣಕ್ಕೆ ಹೋಗಿ ಪಿಕ್‌ ಆಪ್‌ ಮಾಡುವಂತೆ ಸೂಚಿಸಿದರು.

ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯ ಕಡ್ಡಾಯ ಸಮವಸ್ತ್ರ ಧರಿಸಬೇಕು. ವೇಗವಾಗಿ ಚಲಾಯಿಸಬಾರದು. ಮೊಬೈಲ್‌ ಪೋನ್‌ ಉಪಯೋಗಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸದಿರಿ ಎಂದರು. ತಪ್ಪಿದ್ದಲ್ಲಿ ಮುಂದೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next