Advertisement

ಮೀಟರ್‌ ಬಡ್ಡಿ-ಮಟ್ಕಾ ದಂಧೆ ಕಡಿವಾಣಕ್ಕೆ ಕಟ್ಟುನಿಟ್ಟಿನ ಸೂಚನೆ

12:57 PM Feb 11, 2017 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಮೀಟರ್‌ ಬಡ್ಡಿ, ಮಟ್ಕಾ ಸೇರಿದಂತೆ ಅನಧಿಕೃತ ದಂಧೆಗಳಿಗೆ ಕಡಿವಾಣ ಹಾಕಲು, ಅಂತಹ ದಂಧೆಯಲ್ಲಿ ಭಾಗಿಯಾದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ ಹೇಳಿದರು. 

Advertisement

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜಿಲ್ಲಾ, ತಾಲೂಕುಗಳಲ್ಲಿ ಅಕ್ರಮ ವಹಿವಾಟುಗಳು ನಡೆಯುತ್ತಿರುವ ಬಗ್ಗೆ ಸಾಕಷ್ಟು ರುಗಳು ಕೇಳಿ ಬಂದಿವೆ. ಇದನ್ನು ಮಟ್ಟ ಹಾಕಲು ಸರಕಾರ ಮುಂದಾಗಿದೆ. ಮೀಟರ್‌ ಬಡ್ಡಿದಾರರಿಂದ ಸಾಲಗಾರರು ಶೋಷಣೆ, ದೌರ್ಜನ್ಯಕ್ಕೊಳಗಾಗಿರುವ ಬಗ್ಗೆ ದೃಢಪಟ್ಟರೆ ಅಂಥವರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಮೀಟರ್‌ ಬಡ್ಡಿ, ಮಟ್ಕಾ ಸೇರಿದಂತೆ ಇತರೆ ಎಲ್ಲ ಅಕ್ರಮವಾದ, ಕಾನೂನು ಬಾಹಿರವಾದ ಚಟುವಟಿಕೆಗಳನ್ನು ಮಾಡುವಂಥವರು ಯಾರೇ ಆಗಿರಲಿ ಅವರನ್ನು ಕಾನೂನು ಚೌಕಟ್ಟಿನೊಳಗೆ ತರಬೇಕು. ಅದನ್ನು ಸಮರ್ಪಕವಾಗಿ ನಿಭಾಯಿಸಲು ಇಲಾಖೆ ಅಧಿಕಾರಿಗಳು ಇಂತಹದರಲ್ಲಿ ಭಾಗಿಯಾಗಬಾರದು, ಉತ್ತೇಜನ ನೀಡಬಾರದೆಂದು ಸೂಚಿಸಲಾಗಿದೆ. 

ಸಿಐಡಿ ವರದಿ ಬಂದ ನಂತರ ಕ್ರಮ: ಲಕ್ಷ್ಮೇಶ್ವರದಲ್ಲಿ ಪೊಲೀಸ್‌ ಠಾಣೆ ಮೇಲೆಯೇ ಸಾರ್ವಜನಿಕರು ದಾಳಿ ಮಾಡಿ ಬೆಂಕಿ ಹಚ್ಚಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಅದರ ವರದಿ ಬಂದ ನಂತರ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಕಾನೂನು ಬಾಹಿರ ಮರಳು ಮಾμಯಾ ಹತ್ತಿಕ್ಕಲು ಎಲ್ಲ ಅಗತ್ಯ ಪ್ರಯತ್ನ ತೆಗೆದುಕೊಳ್ಳಲಾಗುವುದು.

ಯಾರು ಇದಕ್ಕೆ ಪ್ರೋತ್ಸಾಹ, ಕೈವಾಡವಿದೆ ಅವರನ್ನು ಕಾನೂನು ಚೌಕಟ್ಟಿನಲ್ಲಿ ತರಲಾಗುವುದು. ಲಕ್ಷ್ಮೇಶ್ವರದಲ್ಲಿ ಈ ಘಟನೆ ನಡೆದಿದ್ದು ದುರದೃಷ್ಟಕರ. ಪೊಲೀಸ್‌ ಇಲಾಖೆಯಲ್ಲಿ ತಪ್ಪು ಆಗಿದ್ದರೆ  ಅಂಥವರಿಗೆ ಶಿಕ್ಷೆ ಕೊಡಲು ವಿಧಿ ವಿಧಾನಗಳಿವೆ. ಅನುಪಮಾ ಶೆಣೈ ಪೊಲೀಸ್‌ ಇಲಾಖೆಯಲ್ಲಿ ಇಲ್ಲ. ಹೀಗಾಗಿ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದರು.

Advertisement

ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಗೌಡ ಕೊಲೆಗೆ ಸಂಬಂಧಿಸಿ ಪ್ರಾಥಮಿಕ ತನಿಖೆ ನಡೆದಿದೆ. ಅದರಲ್ಲಿ ಫಲಿತಾಂಶ ಬರಲಿ. ಎಲ್ಲವನ್ನೂ ಸಿಬಿಐಗೆ ವಹಿಸಲು ಆಗಲ್ಲ. ಸಚಿವರ ಮೇಲೆ ಅನೇಕ ಸಂದರ್ಭಗಳಲ್ಲಿ ಆರೋಪಗಳು ಬರುವುದು ಸಹಜ. ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ಫಲಿತಾಂಶ ಸಿಗದಿದ್ದಾಗ ಸಿಬಿಐಗೆ ಆದೇಶಿಸುವ ಕುರಿತು ಪರಿಶೀಲಿಸಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next