Advertisement

‘ತಿನ್ನುವುದನ್ನು ನಿರ್ಧರಿಸುವ ಹಕ್ಕು ಸರಕಾರಗಳಿಗಿಲ್ಲ’

09:35 AM Oct 07, 2017 | Team Udayavani |

ಹೊಸದಿಲ್ಲಿ: ‘ದೇಶಕ್ಕೆ ಬರುವ ಪ್ರವಾಸಿಗರು ಏನನ್ನು ತಿನ್ನಬೇಕು, ಏನನ್ನು ಕುಡಿಯಬೇಕು ಎನ್ನುವುದು ಅವರಿಗೇ ಬಿಟ್ಟದ್ದು. ಅದನ್ನು ಸರಕಾರಗಳು ನಿರ್ಧರಿಸುವಂತಿರಬಾರದು.’ ಹೀಗೆಂದು ಹೇಳಿರುವುದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌. ಕೆಲವು ರಾಜ್ಯಗಳು ಮದ್ಯ ಹಾಗೂ ಗೋಮಾಂಸಕ್ಕೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಅಮಿತಾಭ್‌ ಅವರು ಈ ರೀತಿ ಉತ್ತರಿಸಿದ್ದಾರೆ. 

Advertisement

ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ ಅವರು ಮಾತನಾಡಿದ್ದಾರೆ. ನಮ್ಮ ದೇಶದಲ್ಲಿ ಹಲವು ಪಾರಂಪರಿಕ ತಾಣಗಳಿವೆ. ಹೀಗಾಗಿ, ಅವುಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕೇ ಹೊರತು, ಪ್ರವಾಸಿಗರು ಏನನ್ನು ತಿನ್ನಬೇಕು, ತಿನ್ನಬಾರದು ಎಂಬುದನ್ನು ನಿರ್ಧರಿಸುವುದು ಸಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next