Advertisement

ಮಾರಾಟಕ್ಕಿಲ್ಲ: ಶಾಸಕ ಸುರೇಶ್‌ಗೌಡ

11:20 PM Sep 14, 2019 | Team Udayavani |

ನಾಗಮಂಗಲ: ಕ್ಷೇತ್ರದ ಜನತೆ ಕೊಟ್ಟಿರುವ ಅಧಿಕಾರವನ್ನು ನಾನು ಮಾರಾಟ ಮಾಡಿಕೊಳ್ಳು ವವನಲ್ಲ. ವೈಯಕ್ತಿಕ ಆಸೆಗಾಗಿ ಶಾಸಕ ಸ್ಥಾನವನ್ನು ಮಾರಾಟ ಮಾಡಿಕೊಳ್ಳುವುದಿಲ್ಲ. ನಾನು ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿದ್ದು, ಜೆಡಿಎಸ್‌ನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ನಾಗಮಂಗಲ ಜೆಡಿಎಸ್‌ ಶಾಸಕ ಸುರೇಶ್‌ಗೌಡ ಸ್ಪಷ್ಟಪಡಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ಜೆಡಿಎಸ್‌ನಿಂದ ನಾನು, ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಪಕ್ಷದ ಯಾವೊಬ್ಬ ಶಾಸಕರು ಸಹ ಪಕ್ಷ ತೊರೆಯುವ ಮಾತಿಲ್ಲ. ಹಳೇ ಮೈಸೂರು ಭಾಗದಲ್ಲಿ ನಮ್ಮ ಬದ್ಧ ಎದುರಾಳಿ ಕಾಂಗ್ರೆಸ್‌. ಇಲ್ಲಿ ಬಿಜೆಪಿಗೆ ನೆಲೆ ಇಲ್ಲ. ಆದ್ದರಿಂದ ಕಾಂಗ್ರೆಸ್‌ ಜೊತೆ ಮೈತ್ರಿ ಬೇಡವೆಂದು ಹಿಂದೆ ತಿಳಿಸಿದ್ದೆವು.

ಮೈತ್ರಿ ಸರ್ಕಾರದ ಪತನದ ನಂತರ ನಮ್ಮ ಪಕ್ಷದ ಬಹುತೇಕ ಎಲ್ಲಾ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸೋಣ ಎಂದು ವರಿಷ್ಠರ ಗಮನಕ್ಕೆ ತಂದೆವು. ಬಿಜೆಪಿ ನಿಮ್ಮನ್ನು ಈಗ ಗೌರವಯುತವಾಗಿ ನಡೆಸಿಕೊಳ್ಳುವುದಾದರೆ ನಿಮ್ಮೆಲ್ಲರ ಹಿತದೃಷ್ಠಿಯಿಂದ ಒಪ್ಪಿಕೊಳ್ಳಲು ಸಿದ್ಧ ಎಂದು ವರಿಷ್ಠರು ಹೇಳಿದ್ದರು. ಆದರೆ, ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next