Advertisement

NPRನಲ್ಲಿ ಯಾವುದೇ ದಾಖಲೆ ಪರಿಶೀಲನೆ ಇಲ್ಲ, ಆಧಾರ್ ಮಾಹಿತಿ ಕಡ್ಡಾಯವಲ್ಲ; ಕೇಂದ್ರ ಸರ್ಕಾರ

09:51 AM Feb 05, 2020 | Nagendra Trasi |

ನವದೆಹಲಿ: ದೇಶಾದ್ಯಂತ ಪ್ರಸ್ತಾಪಿತ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ಮಂಗಳವಾರ ಗೃಹ ಸಚಿವಾಲಯ ಈ ಕುರಿತು ಲೋಕಸಭೆಗೆ ಸ್ಪಷ್ಟನೆ ನೀಡಿದೆ ಎಂದು ವರದಿ ತಿಳಿಸಿದೆ.

Advertisement

ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಯಾವುದೇ ದಾಖಲಾತಿ ಪರಿಶೀಲನೆ (ಋಜುವಾತು) ನಡೆಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಎನ್ ಪಿಆರ್ ನಲ್ಲಿ ವೈಯಕ್ತಿಕವಾಗಿ ನಾಗರಿಕತ್ವದ ಬಗ್ಗೆ ಅನುಮಾನ ಬಂದರೂ ಕೂಡಾ ಯಾವುದೇ ದಾಖಲಾತಿ ಪರಿಶೀಲನೆ ನಡೆಸುವುದಿಲ್ಲ ಎಂದು ತಿಳಿಸಿದೆ.

ಎನ್ ಪಿಆರ್ ಮಾಹಿತಿ ಸಂಗ್ರಹದ ವೇಳೆ ಯಾವುದೇ ದಾಖಲೆಗಳನ್ನು ಸಂಗ್ರಹಿಸುವುದಿಲ್ಲ ಎಂದು ಕೇಂದ್ರ ತಿಳಿಸಿದೆ. ಎನ್ ಪಿಆರ್ ಮಾಹಿತಿ ನೀಡುವ ವೇಳೆ ಆಧಾರ್ ನಂಬರ್ ಕೊಡಬೇಕು ಎಂಬುದು ಕೂಡಾ ಕಡ್ಡಾಯವಲ್ಲ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ಅವರು ಲೋಕಸಭೆಗೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next