Advertisement

ಉತ್ಪಲ್ ಪರೀಕರ್ ಗಿಲ್ಲ ಟಿಕೆಟ್?: ಗೋವಾ ಬಿಜೆಪಿಯಲ್ಲಿ ಅಸಮಾಧಾನ

12:37 PM Jan 06, 2022 | Team Udayavani |

ಪಣಜಿ: ಗೋವಾ ರಾಜಧಾನಿ ಪಣಜಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಮನೋಹರ್ ಪರೀಕರ್ ಅವರ ಪುತ್ರ ಉತ್ಪಲ್ ಪರೀಕರ್ ಬದಲಿಗೆ ಹಾಲಿ ಶಾಸಕ ಬಾಬೂಶ್ ಮೊನ್ಸೆರಾತ್ ರವರಿಗೆ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಕುರಿತಂತೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸೂಚನೆ ನೀಡಿದ್ದಾರೆ.

Advertisement

ಉತ್ಪಲ್ ಪರೀಕರ್ ರವರು ಪಣಜಿ ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸಲು ಸಿದ್ಧತೆ ನಡೆಸುತ್ತಿದ್ದು,ಕ್ಷೇತ್ರದಿಂದ ಹಾಲಿ ಶಾಸಕ ಬಾಬೂಶ್ ಮೊನ್ಸೆರಾತ್ ರವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಟಿಕೆಟ್ ಪಡೆಯುವ ಕಸರತ್ತು ಆರಂಭಿಸಿರುವ ಉತ್ಪಲ್ ಪರೀಕರ್ ರವರು ಇತ್ತೀಚೆಗೆ ದೆಹಲಿಗೆ ಹೋಗಿ ಬಂದಿರುವ ವಿಷಯವೂ ಬಹಿರಂಗವಾಗಿದೆ. ಆದರೆ ಪಣಜಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಪಣಜಿ ಕ್ಷೇತ್ರದಿಂದ ಶಾಸಕ ಬಾಬೂಶ್ ಮೊನ್ಸೆರಾತ್ ಸ್ಫರ್ಧಿಸುವ ಸುಳಿವು ನೀಡಿದ್ದಾರೆ.

ಗೋವಾ ವಿಧಾನಸಭಾ ಚುನಾವಣೆ ಹಿನ್ನೆಯಲ್ಲಿ ಬಿಜೆಪಿಯಲ್ಲಿಯೇ ಈಗಾಗಲೇ ಅಸಮಾಧಾನ ಚಿತ್ರಣ ಮೂಡಿದ್ದು, ಉಪಮುಖ್ಯಮಂತ್ರಿ ಬಾಬು ಆಜಗಾಂವಕರ್ ರವರಿಗೆ ಪೆಡ್ನೆ ಮತಕ್ಷೇತ್ರವನ್ನು ಬಿಟ್ಟು ಮಡಗಾಂವ ಕ್ಷೇತ್ರದಲ್ಲಿ ಸ್ಫರ್ಧಿಸಲು ಸೂಚಿಸಲಾಗಿದೆ. ಆದರೆ, ಆಜಗಾಂವಕರ್ ರವರು ತಾನು ಪೆಡ್ನೆ ಕ್ಷೇತ್ರದಿಂದಲೇ ಸ್ಫರ್ಧಿಸುವುದಾಗಿ ಹೇಳಿಕೆ ನೀಡಿದ್ದಾರೆ. ಹೀಗೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯಾಡಲಾರಂಭಿಸಿದೆ. ಇದನ್ನು ಬಿಜೆಪಿ ಶಮನಮಾಡದಿದ್ದರೆ ಈ ಬಂಡಾಯ ಬಿಜೆಪಿಗೆ ನಷ್ಟ ತಂದೊಡ್ಡುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next