Advertisement

ನಮ್ಮಲ್ಲಿರುವುದು ಒಂದೇ ಬಣ, ಅದು ಬಿಜೆಪಿ ಬಣ: ಶಾಸಕ ರಾಜೂಗೌಡ

12:10 PM Feb 01, 2021 | keerthan |

ಬೆಂಗಳೂರು: ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಬಣವಿದೆ ಎನ್ನುವುದು ಸುಳ್ಳು. ಇರುವುದು ಒಂದೇ ಬಣ, ಅದು ಬಿಜೆಪಿ ಬಣ ಎಂದು ಶಾಸಕ ರಾಜೂಗೌಡ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅತೃಪ್ತರ ಯಾವ ಸಭೆಯೂ ಸೇರಿಲ್ಲ. ಯಾವ ಸಭೆಯನ್ನೂ ಮಾಡಿಲ್ಲ. ಮಾಡಿದರೆ ನಿಮ್ಮನ್ನು ಕರೆದು ಹೇಳುತ್ತೇವೆ ಎಂದರು.

ಇದನ್ನೂ ಓದಿ:ಈ ಬಾರಿಯ ಅಧಿವೇಶನದಲ್ಲಿ ಯಾವುದೇ ಹೊಸ ಬಿಲ್ ಮಂಡನೆ ಮಾಡಲ್ಲ: ರಾಜ್ಯ ಸರ್ಕಾರ

ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಫೆ.9 ರಂದು ರಾಜನಹಳ್ಳಿಯಲ್ಲಿ ಮೀಸಲಾತಿ ಹೋರಾಟ ಮಾಡಲಾಗುತ್ತಿದೆ. ವಾಲ್ಮೀಕಿ ಜನಾಂಗಕ್ಕೆ 7.5 ಮೀಸಲಾತಿ ಕೇಳಿದ್ದೆವು. ಶ್ರೀ ರಾಮುಲು ಅವರಿಗೆ ಮನವಿ ಮಾಡುತ್ತೇನೆ ಎಂದರು.

ಗುರುಗಳು ಕಳೆದ ಬಾರಿ ಪ್ರತಿಭಟನೆಗೆ ಕುಳಿತಾಗ ಸಂಧಾನ ಮಾಡಿದರು. ಈಗ ಪಂಚಮಸಾಲಿ, ಕುರುಬರು, ಪೂಜಾರರು, ಎಸ್ಸಿ, ಎಸ್ಟಿ ಎಲ್ಲಾ ಸಮುದಾಯದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ನಮಗೂ ಮೀಸಲಾತಿ ನೀಡುವಂತೆ ಮನವಿ ಮಾಡುತ್ತೇವೆ ಎಂದು ರಾಜೂಗೌಡ ಹೇಳಿದರು.

Advertisement

ಇದನ್ನೂ ಓದಿ: ಮತ್ತೆ ರಾಹುಲ್ ಗಾಂಧಿಗೆ ಒಲಿಯಲಿದೆ ಕಾಂಗ್ರೇಸ್‌ ಅಧ್ಯಕ್ಷ ಪಟ್ಟ : ದಿಲ್ಲಿ ಕಾಂಗ್ರೇಸ್ ನಿರ್ಣಯ

Advertisement

Udayavani is now on Telegram. Click here to join our channel and stay updated with the latest news.

Next