Advertisement

Politics; ಲೋಕಸಭೆ ಬಿಟ್ಟು ಬೇರೆ ಚುನಾವಣೆಗಳಲ್ಲಿ ಜೆಡಿಎಸ್ ಜತೆ ಮೈತ್ರಿಯಿಲ್ಲ: ಈಶ್ವರಪ್ಪ

03:35 PM Nov 04, 2023 | Team Udayavani |

ಮೈಸೂರು:  ದಕ್ಷಿಣ ಶಿಕ್ಷಕರ ಸೇರಿದಂತೆ ಯಾವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ ಜೆಡಿಎಸ್ ಮೈತ್ರಿ ಇಲ್ಲ. ನನಗೆ ಗೊತ್ತಿರುವ ಪ್ರಕಾರ ಲೋಕಸಭಾ ಚುನಾವಣೆ ಬಿಟ್ಟು ಉಳಿದ ಯಾವ ಚುನಾವಣೆಯಲ್ಲೂ ಮೈತ್ರಿ ಮಾತು ಆಡಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಚುನಾವಣೆಯಲ್ಲೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಾಕಲಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಸೇರಿ ನಾವು ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.

ಇದನ್ನೂ ಓದಿ:World Cup 2023; ಭಾರತ ವಿರುದ್ಧ ಹೀನಾಯ ಸೋಲು; ತಂಡದಿಂದ ವಿವರಣೆ ಕೇಳಿದ ಲಂಕಾ ಮಂಡಳಿ

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, ಬಾಂಬೆಗೆ ಹೋದ ಶಾಸಕರು ದುಡ್ಡು ತೆಗೆದುಕೊಂಡರು ಎಂದು ವಿಶ್ವನಾಥ್ ಯಾವ ಆಧಾರದ ಮೇಲೆ ಹೇಳುತ್ತಾರೆ. ಇವರು ಪಡೆದುಕೊಂಡಿಲ್ಲ ಎಂಬುದಕ್ಕೆ ಸಾಕ್ಷಿ ಏನು. ಬೇರೆಯವರು ತೆಗೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಏನು? ಸುಮ್ಮನೆ ವಿಶ್ವನಾಥ್ ಏನೇನೂ ಮಾತನಾಡಬಾರದು. ನಾನ್ನೊಬ್ಬ ಒಳ್ಳೆಯವನು ಉಳಿದವರು ಕೆಟ್ಟವರು ಎಂಬ ರೀತಿ ಮಾತನಾಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next