Advertisement

ನಿಟ್ಟಡೆ ಸಂಶೋಧಕ ಅಮೆರಿಕದಲ್ಲಿ ಸಾವು

11:21 PM Aug 27, 2019 | Team Udayavani |

ವೇಣೂರು: ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಜೆ ಮೂಲದ ಚೈತನ್ಯ ಸಾಠೆ (36) ಅವರು ಪರ್ವತಾ ಅವರೋಹಣ ಸಂದರ್ಭ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ.

Advertisement

ಇವರು ಪೋರ್ಟ್‌ಲ್ಯಾಂಡ್‌ ಮೂಲದ ಮಾಝಾಮಾಸ್‌ ಎಂಬ ಪರ್ವತಾರೋಹಿ ಸಂಘಟನೆಯಲ್ಲಿದ್ದು, ಅನೇಕ ಚಾರಣ ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಮೆರಿಕದಲ್ಲಿನ ಸ್ಮಿತ್‌ರಾಕ್‌ ಗಿರಿಶಿಖರವನ್ನು ಇಳಿಯುತ್ತಿರುವ ಸಂದರ್ಭ ಕಾಲು ಜಾರಿ 100 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿರುವುದಾಗಿ ಹೇಳಲಾಗಿದೆ. 12 ಮಂದಿಯ ಗೆಳೆಯರ ತಂಡ ಚಾರಣಕ್ಕೆ ತೆರಳಿದ್ದು, ಘಟನೆ ನಡೆದ ತಕ್ಷಣ ರಮೇಶ್‌ ಸಾಠೆಯವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಚೈತನ್ಯ ಅವರು ಬೆಂಗಳೂರಿನಲ್ಲಿ ವಾಸವಾಗಿರುವ ಹಿರಿಯ ವಿಜ್ಞಾನಿ ರಮೇಶ್‌ ಸಾಠೆಯವರ ಪುತ್ರ. ವಿಜ್ಞಾನ, ಆಧ್ಯಾತ್ಮದ ಸಂಶೋಧಕರಾಗಿದ್ದ ಇವರು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದು ಅಮೆರಿಕದ ಚಂಪಗಾನೆ ಅರ್ಬನಾ ನಗರದ ಈಲ್ಲಿನೋಇಸ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next