Advertisement
ಧ್ವನಿಮತ 2 ಬಾರಿ ವಿಫಲ: ಸ್ಪೀಕರ್ ವಿಶ್ವಾಸ ಸಾಬೀತುಪಡಿಸಲು ನಡೆಸಿದ ಧ್ವನಿಮತ ಯತ್ನ ಪ್ರತಿಪಕ್ಷಗಳು ಮಾಡಿದ ಗದ್ದಲದ ಪರಿಣಾಮ 2 ಬಾರಿ ವಿಫಲವಾಯಿತು. ಇದಾದ ನಂತರ ಆರ್ಜೆಡಿ ಹಿರಿಯ ಶಾಸಕ ಅಬ್ದುಲ್ ಸಿದ್ದಿಕಿ ಅವರು ಗುಪ್ತ ಮತದಾನಕ್ಕೆ ಆಗ್ರಹಿಸಿದರು. ಆದರೆ ಸ್ಪೀಕರ್ ಇದನ್ನು ತಿರಸ್ಕರಿಸಿದರು.
Related Articles
‘ನಿತೀಶ್ ಕುಮಾರ್ ಗೆದ್ದಿದ್ದಾರೆ. ಪಾಕಿಸ್ಥಾನದಲ್ಲಿ ಪಟಾಕಿ ಸಿಡಿಸಿದ್ದೀರೋ…?’ ಹೀಗೆಂದು ಕೇಳುವ ಮೂಲಕ ಶಿವಸೇನೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಲೇವಡಿ ಮಾಡಿದೆ. ಅದಕ್ಕೂ ಕಾರಣವಿದೆ. “ನಿತೀಶ್ ಅವರೊಂದಿಗೆ ಮೈತ್ರಿ ಸಾಧ್ಯವಾಗಿ, ಗೆಲುವು ಸಾಧಿಸಿದರೆ ಪಾಕಿಸ್ಥಾನದಲ್ಲೂ ಪಟಾಕಿ ಸಿಡಿಸಲಾಗುತ್ತದೆ’ ಎಂದು ಚುನಾವಣೆ ವೇಳೆ ಅಮಿತ್ ಶಾ ಹೇಳಿಕೆ ನೀಡಿದ್ದರು.
Advertisement
ಜನ ಸೇವೆ ಮಾಡಲಿದ್ದೇನೆಯೇ ಹೊರತು ಒಂದು ಕುಟುಂಬದ ಸೇವೆಯನ್ನಲ್ಲ. ಜಾತ್ಯತೀತದ ಸೋಗಿನಲ್ಲಿ ಇರುವವರ ಜತೆ ಇರಲು ಖಂಡಿತಾ ಬಯಸುವುದಿಲ್ಲ. ಜನ ನೀಡಿದ ತೀರ್ಪು ದೊಡ್ಡದು. – ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ 243 : ಒಟ್ಟು ಸದಸ್ಯಬಲ
4 : ಮತಚಲಾಯಿಸದ ಸದಸ್ಯರು
239 : ಮತಚಲಾಯಿಸಿದ ಸದಸ್ಯರು
131 : ಸದಸ್ಯರಿಂದ ವಿಶ್ವಾಸ
108 : ಸದಸ್ಯರಿಂದ ಅವಿಶ್ವಾಸ
120 : ಅಗತ್ಯವಿದ್ದ ಸಂಖ್ಯಾಬಲ