Advertisement

ಪಕ್ಷ ವಿರೋಧಿ ಚಟುವಟಿಕೆ: 21 ಜೆಡಿಯು ಸದಸ್ಯರ ಉಚ್ಚಾಟನೆ

03:38 PM Aug 14, 2017 | Team Udayavani |

ಪಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು, ಪಕ್ಷ ವಿರೋಧ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪದ ಮೇಲೆ ಪಕ್ಷದ 21 ಸದಸ್ಯರನ್ನು ಅವರ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾ ಮಾಡಿದೆ. 

Advertisement

ರಾಜ್ಯಸಭೆಯಲ್ಲಿ ಜೆಡಿಯು ಪಕ್ಷದ ನಾಯಕರಾಗಿದ್ದ ಹಿರಿಯ ಸದಸ್ಯ ಶರದ್‌ ಯಾದವ್‌ ಅವರನ್ನು ಬದಲಾಯಿಸಿ ಅವರ ಸ್ಥಾನದಲ್ಲಿ ಚಂದ್ರ ಪ್ರಸಾದ್‌ ಸಿಂಗ್‌ ಅವರನ್ನು ನೇಮಿಸಲಾದ ಬೆನ್ನಿಗೇ ಇದೀಗ ಜೆಡಿಯು ತನ್ನ 21 ಸದಸ್ಯರನ್ನು ಉಚ್ಚಾಟಿಸುವ ಕ್ರಮ ತೆಗೆದುಕೊಂಡಿದೆ. 

ವಜಾಗೊಂಡಿರುವ 21 ಸದಸ್ಯರ ಪೈಕಿ ಮಾಜಿ ಸಚಿವ ರಮಾಯಿ ರಾಮ್‌, ಮಾಜಿ ಸಂಸದ ಅರ್ಜುನ್‌ ರಾಯ್‌ ಮತ್ತು ಮಾಜಿ ಶಾಸಕ ರಾಜ್‌ಕಿಶೋರ್‌ ಸಿನ್ಹಾ ಸೇರಿದ್ದಾರೆ. 

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ವಶಿಷ್ಠ ನಾರಾಯಣ ಸಿಂಗ್‌ ಅವರು 21 ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಲಾಗಿರುವುದನ್ನು ದೃಢೀಕರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next