Advertisement

ಮಂದಿರ ವಿವಾದ ಇತ್ಯರ್ಥಗೊಳಿಸಿ: ಬಿಜೆಪಿಗೆ ನಿತೀಶ್‌ ಕುಮಾರ್‌ ಆಗ್ರಹ

06:10 AM Dec 24, 2018 | Team Udayavani |

ಹೊಸದಿಲ್ಲಿ: ರಾಮಮಂದಿರ ವಿವಾದವನ್ನು ನ್ಯಾಯಾಲಯ ಅಥವಾ ಮಾತುಕತೆಯ ಮೂಲಕ ಬೇಗನೇ ಬಗೆಹರಿಸಬೇಕೆಂದು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಬಿಜೆಪಿಯನ್ನು ಆಗ್ರಹಿಸಿದ್ದಾರೆ. “”ರಾಮ ಮಂದಿರ ವಿವಾದ ಇತ್ಯರ್ಥವಾಗದೇ ದಶಕಗಳೇ ಉರುಳಿವೆ. 

Advertisement

ಈಗಾಲಾದರೂ ಇದು ಇತ್ಯರ್ಥವಾಗಬೇಕಿದೆ” ಎಂದಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರಬೇಕೆಂದು ಹಿಂದೂ ಪರ ಸಂಘಟನೆಗಳು, ಬಿಜೆಪಿಯ ಸೈದ್ಧಾಂತಿಕ ಸಂಸ್ಥೆಯಾದ ಆರ್‌ಎಸ್‌ಎಸ್‌ ಈಗಾಗಲೇ ಕೇಂದ್ರ ಸರಕಾರ‌ವನ್ನು ಆಗ್ರಹಿಸುತ್ತಿರುವ ಬೆನ್ನಲ್ಲೇ ನಿತೀಶ್‌ರ ಈ ಹೇಳಿಕೆ ಕುತೂಹಲ ಮೂಡಿಸಿದೆ.

ಬಿಜೆಪಿಯಿಂದ ಮಾತ್ರ ಸಾಧ್ಯ: ಮತ್ತೂಂದೆಡೆ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ. ಲಕ್ನೋದ ಸ್ಮತಿ ಉಪವನದಲ್ಲಿ ಏರ್ಪಡಿಸಲಾಗಿದ್ದ ಯುವ ಕುಂಭ ಸಮ್ಮೇಳನದಲ್ಲಿ ಮಾತನಾಡಿದ ಅವರು, “”ಬಿಜೆಪಿ ಹೊರತುಪಡಿಸಿ ಯಾವ ಪಕ್ಷದಿಂದಲೂ ರಾಮಮಂದಿರ ಕಟ್ಟಲು ಸಾಧ್ಯವಿಲ್ಲ. ಆ ಮಂದಿ(ಕಾಂಗ್ರೆಸ್‌) ಜನಿವಾರವನ್ನು ಕೇವಲ ಮತಗಳಿಗಾಗಿ ಹಾಕಿಕೊಳ್ಳುತ್ತಾರೆ. ಅದೇ ಜನ ಹಿಂದೆ ರಾಮ, ಕೃಷ್ಣರು ಇದ್ದರೆಂಬುದನ್ನೇ ಅಲ್ಲಗಳೆದಿದ್ದರು. ಅಂಥವರಿಂದ ರಾಮ ಮಂದಿರವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ” ಎಂದು ಗುಡುಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next