Advertisement

ನಿರ್ಭಯಾ ಪ್ರಕರಣ: ಕ್ಯುರೇಟಿವ್ ಅರ್ಜಿ ಸಲ್ಲಿಸಿದ ಮುಖೇಶ್ ಸಿಂಗ್

10:07 AM Jan 10, 2020 | Team Udayavani |

ನವದೆಹಲಿ: 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಖಾಯಂಗೊಳಿಸಿ ಸುಪ್ರೀಂಕೋರ್ಟ್ ಡೆತ್ ವಾರಂಟ್ ಅನ್ನೂ ಸಹ ವಿಧಿಸಿದೆ.

Advertisement

ಈ ನಡುವೆ ನೇಣು ಕುಣಿಕೆಯಿಂದ ಪಾರಾಗುವ ಕೊನೆಯ ಪ್ರಯತ್ನವೆಂಬಂತೆ ನಾಲ್ವರು ಅಪರಾಧಿಗಳಲ್ಲಿ ಇಬ್ಬರು ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದಾರೆ. ವಿನಯ್ ಕುಮಾರ್ ಶರ್ಮಾ ಮೊದಲಾಗಿ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದರೆ ಇಂದು ಇನ್ನೊಬ್ಬ ಅಪರಾಧಿ ಮುಖೇಶ್ ಸಿಂಗ್ ಸರ್ವೋಚ್ಛ ನ್ಯಾಯಾಲಯಕ್ಕೆ ತನ್ನ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದಾನೆ.

ಕ್ಯುರೇಟಿವ್ ಅರ್ಜಿ ಸಲ್ಲಿಸುವುದು ಮರಣದಂಡನೆ ಶಿಕ್ಷೆ ಖಾಯಂಗೊಂಡ ಬಳಿಕ ಇದರಿಂದ ಪಾರಾಗಲು ಅಪರಾಧಿಗಳಿಗೆ ಸಿಗುವ ಕೊನೆಯ ಅವಕಾಶವಾಗಿರುತ್ತದೆ. ಆದರೆ ಮರಣ ದಂಡನೆ ತೀರ್ಪಿನಲ್ಲಿ ಏನಾದರು ಲೋಪವಿದ್ದಲ್ಲಿ ಮಾತ್ರವೇ ನ್ಯಾಯಾಲಯವು ಅಪರಾಧಿಗಳ ಕ್ಯುರೇಟಿವ್ ಅರ್ಜಿಯನ್ನು ಮಾನ್ಯ ಮಾಡುತ್ತದೆ. ಹಾಗಾಗಿ ನಿರ್ಭಯಾ ಪ್ರಕರಣದ ಅಪರಾಧಿಗಳ ವಿಚಾರದಲ್ಲಿ ಕ್ಯುರೇಟಿವ್ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆಗಳು ದಟ್ಟವಾಗಿದ್ದು ಈ ಕಾಮಾಂಧರು ಇದೇ ಜನವರಿ 22ರ ಬೆಳಿಗ್ಗೆ ನೇಣುಗಂಬಕ್ಕೆ ಏರುವುದು ಬಹುತೇಕ ಖಚಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next