Advertisement

ಬಾವಲಿ ಸಂತತಿಗೇ ಮಾರಕವಾದ ನಿಫ

11:19 AM May 28, 2018 | |

ತುಮಕೂರು: ಇಂದಿನ ಆಧುನಿಕ ಭರಾಟೆಯ ನಡುವೆ ನಮೊಟ್ಟಿಗೆ ಬದುಕು ನಡೆಸುತ್ತಿದ್ದ ಅನೇಕ ಜೀವ ಜಂತುಗಳು ಕಾಣದಂತಹ ಸ್ಥಿತಿ ತಲುಪಿವೆ. ಪ್ರಾಣಿ ಜಗತ್ತಿನಲ್ಲಂತೂ ದುರ್ಬಲ ಜೀವಿಗಳಿಗೆ ಉಳಿಗಾಲವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

Advertisement

ಆಹಾರ ಹುಡುಕಿಕೊಂಡು ಕಾಡಿನಲ್ಲಿರ ಬೇಕಾದ ಪ್ರಾಣಿ ಪಕ್ಷಿಗಳು ನಾಡಿನತ್ತ ಆಗಮಿಸು ತ್ತಿದ್ದು, ಪರಿಸರ ಅಸಮತೋಲನ ದಿಂದ ಕಣ್ಣಿಗೆ ಕಾಣ ದಂತೆ ಅನೇಕ ಜೀವ ಜಂತುಗಳು ದೂರವಾಗುತ್ತಿವೆ. ಈಗ ಈ ಸಾಲಿಗೆ ಬಾವಲಿಗಳು ಸೇರುತ್ತಿವೆ. ನಿಪ ವೈರಾಣು ಬಾವಲಿಗಳಿಂದ ಹರಡುತ್ತಿದೆ ಎಂದು ಅವು ಗಳನ್ನು ಸಾಯಿಸಲು ಮುಂದಾಗುತ್ತಿದ್ದಾರೆ.

ಬಾವಲಿಗಳಿಂದ ನಿಪ ವೈರಾಣು ಹರಡುತ್ತಿದೆಯೇ? 
ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಪ ವೈರಾಣುವಿನಿಂದ ಕಾಣಿಸಿಕೊಳ್ಳುತ್ತಿರುವ ರೋಗದಿಂದ ಮನುಷ್ಯ ಉಳಿಯುವುದಿಲ್ಲ ಎನ್ನುವ ಹಿನ್ನೆಲೆಯಲ್ಲಿ ಈ ವೈರಾಣು ಬಾವಲಿಗಳಿಂದ ಮತ್ತು ಕೆಲವು ಹಕ್ಕಿ ಪಕ್ಷಿಗಳಿಂದ ಹಂದಿಗಳಿಂದ ಹರಡುತ್ತದೆ ಎನ್ನುವ ಸುದ್ದಿ ಹಿನ್ನೆಲೆಯಲ್ಲಿ ಈಗ ಈ ಬಾವಲಿಗಳ ಸಂತತಿಯನ್ನು ನಾಶ ಮಾಡಲು ಹೊರಟಿರುವುದು ಅಪರೂಪದ ಪಕ್ಷಿಗಳ ವಿನಾಶ ಮಾಡಿದಂತೆ ಆಗುತ್ತದೆ.

ಬಾವಲಿಗಳಿಂದ ನಿಪ ವೈರಾಣು ಹರಡುತ್ತಿಲ್ಲ ಎಂದು ಈಗಾಗಲೇ ಧೃಡಪಟ್ಟಿದೆ. ಆದರೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಬಾವಲಿಗಳನ್ನು ಹಿಡಿದು ಸಾಯಿಸಿ ಅವುಗಳನ್ನು ಭೂಮಿಯಲ್ಲಿ
ಹೂಳಲು ತೀರ್ಮಾನ ಕೈಗೊಂಡಿರುವುದು ಪಕ್ಷಿ ಪ್ರಿಯರಿಗೆ ಆತಂಕ ಉಂಟಾಗಿದೆ.

ರೈತ ಸ್ನೇಹಿ ಬಾವಲಿ: ಪ್ರಕೃತಿಯಲ್ಲಿ ಪ್ರತಿಯೊಂದು ಪ್ರಾಣಿ ಪಕ್ಷಿಯೂ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬಾವಲಿಗಳು ರೈತ ಸ್ನೇಹಿಯಾಗಿವೆ. ರಾತ್ರಿ ವೇಳೆಯಲ್ಲಿ ಹಣ್ಣು ಹಂಪಲುಗಳನ್ನು ತಿಂದು ಆ ಬೀಜವನ್ನು ಪರಿಸರದಲ್ಲಿ ಉದುರಿಸಿ ಗಿಡ ಮರಗಳು ಬೆಳೆಯಲು ಸಹಕಾರಿಯಾಗುತ್ತೆ. ಕೆಲವು ಕೀಟಗಳನ್ನು ತಿಂದು ರೈತರಿಗೆ ನೆರವಾಗುತ್ತವೆ. ಇಂತಹ ಬಾವಲಿಗಳಿಂದ ರೋಗ ಹರಡುತ್ತಿದೆ ಎಂದು ವದಂತಿ ಹುಟ್ಟುತ್ತಿದೆ.

Advertisement

ನಿಪ ರೋಗ ಕಾಣಿಸಿಕೊಂಡಿರುವುದು ಕೇರಳದಲ್ಲಿ. ತುಮಕೂರಿಗೂ ಕೇರಳಕ್ಕೂ ನೂರಾರು ಕಿ.ಮೀ. ಅಂತರವಿದೆ. ಬಾವಲಿಗಳ ಒಂದು ದಿನಕ್ಕೆ ಹತ್ತರಿಂದ ಹದಿನೈದು ಕಿ.ಮೀ. ದೂರ ಹೋಗಿ ಆಹಾರ ಸೇವಿಸಿ ಬೆಳಗಾಗುವುದರೊಳಗೆ ತಮ್ಮ ಸ್ಥಳಕ್ಕೆ ಬಂದು ಮರದಲ್ಲಿ ನೇತಾಡುತ್ತವೆ. ಈ ಬಾವಲಿಗಳಿಗೆ ಆ ವೈರಾಣು ಹರಡಿಲ್ಲ ಆದರೆ ಈ ಬಾಗದ
ಬಾವಲಿಗಳನ್ನು ಹಿಡಿದು ಸಾಯಿಸಲು ಗ್ರಾಮ ಪಂಚಾಯಿತಿ ನಿರ್ಧಾರ ಕೈಗೊಂಡಿರುವುದು ಎಷ್ಟು ಸರಿ ಎನ್ನುವ ಚರ್ಚೆ ಆರಂಭಗೊಂಡಿದೆ.

ಈಗಾಗಲೇ ಹಲವು ಪಕ್ಷಿ ಸಂಕುಲ ನಾಶವಾಗಿವೆ ಇರುವ ಪಕ್ಷಿಗಳನ್ನು ಸಂರಕ್ಷಿಸಿ ಅವುಗಳ ಸಂತತಿಯನ್ನು ಬೆಳವಣಿಗೆ ಮಾಡುವತ್ತ ಸರ್ಕಾರ ಸೂಕ್ತ ದಿಟ್ಟ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಎಲ್ಲಿಯೂ ಬಾವಲಿ ಸೇರಿದಂತೆ ಯಾವುದೇ ಪ್ರಾಣಿ ಪಕ್ಷಿಗಳನ್ನು ಸಾಯಿಸದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next