Advertisement
ಈ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಪಂಡಿತಾ ಶುಭಾ ಮುದ್ಗಲ್ ,ಪಂ. ಉದಯ್ ಭವಾಲ್ಕರ್ (ಧ್ರುಪದ್ ಗಾಯನ), ಪಂ.ವಿನಾಯಕ ತೊರವಿ (ಶಾಸ್ತ್ರೀಯ ಗಾಯನ), ವಿದುಷಿ ಜಯಂತಿ ಕುಮರೇಶ್ (ಕರ್ನಾಟಕೀ ವೀಣಾ), ಪಂ.ರವೀಂದ್ರ ಯಾವಗಲ್ (ತಬಲಾ ಸೋಲೋ), ಪಂ. ರುಚಿರಾ ಪಾಂಡಾ (ಶಾಸ್ತ್ರೀಯ ಗಾಯನ) ಭಾಗವಹಿಸಲಿದ್ದಾರೆ.
ಹಿಂದೂಸ್ಥಾನಿ ಸಂಗೀತದಲ್ಲಿ ಕೆಲವು ರಾಗಗಳನ್ನು ಕೆಲವು ಸಮಯದಲ್ಲಿ ಮಾತ್ರ ಹಾಡಬಹುದಾಗಿದೆ. ದರ್ಬಾರಿ, ಮಿಯಾ ಮಲ್ಹಾರ್,ಸೋಹಿನಿ, ಜೈಜೈವಂತಿ ಮುಂತಾದ ರಾಗಗಳು ಮಧ್ಯರಾತ್ರಿಯ ರಾಗಗಳು. ಅವುಗಳನ್ನು ಬೇರೆ ಸಮಯದಲ್ಲಿ ಹಾಡುವುದಿಲ್ಲ. ಹಾಗೆಯೇ ಲಲತ್, ಭಟಿಯಾರ್, ಭಂಕಾರ್ ರಾಗಗಳು ಬೆಳಗಿನ ಜಾವದ ರಾಗಗಳು. ಸಾಮಾನ್ಯವಾಗಿ ಸಂಗೀತ ಕಛೇರಿಗಳು ರಾತ್ರಿ 10ರ ಒಳಗೆ ಮುಗಿಯುವುದರಿಂದ, ಈ ಅಪರೂಪದ ರಾಗಗಳನ್ನು ಕೇಳುವ ಅವಕಾಶ ಶ್ರೋತೃಗಳಿಗೆ ಸಿಗುವುದಿಲ್ಲ. ದೇಶಪಾಂಡೆ ಸಂಗೀತ ಸಭಾದ ಈ ಕಾರ್ಯಕ್ರಮದಲ್ಲಿ ಅಪರೂಪದ ರಾಗಗಳಿಗೂ ನೀವು ಕಿವಿಯಾಗಬಹುದು.
Related Articles
Advertisement
ಎಲ್ಲಿ?: ಪಥಿ ಸಭಾಂಗಣ,ರಾಮ ಮಂದಿರ, ಎನ್.ಆರ್.ಕಾಲೊನಿ ಬಸ್ ನಿಲ್ದಾಣದಎದುರು, ಬಸವನಗುಡಿ ಯಾವಾಗ?: ಮಾ.2,ಶನಿವಾರ ರಾತ್ರಿ 9ರಿಂದ
ಪ್ರವೇಶ: ಉಚಿತ