Advertisement

ಒಡಿಶಾದಲ್ಲಿ ‘ಅಗ್ನಿ ಪ್ರೈಮ್‌’ ಕ್ಷಿಪಣಿ ರಾತ್ರಿ ಉಡಾವಣೆ ಯಶಸ್ವಿ

01:17 AM Apr 05, 2024 | Team Udayavani |

ಹೊಸದಿಲ್ಲಿ: ಒಡಿಶಾ ಕರಾವಳಿಯ ಅಬ್ದುಲ್‌ ಕಲಾಂ ದ್ವೀಪದಲ್ಲಿ ಹೊಸ ಪೀಳಿಗೆಯ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ “ಅಗ್ನಿ ಪ್ರೈಮ್‌’ ರಾತ್ರಿ ಉಡಾವಣೆಯನ್ನು ಭಾರತ ಯಶಸ್ವಿಯಾಗಿ ನಡೆಸಿದೆ. ಈ ಮೂಲಕ ದೇಶದ ಶತ್ರು ನಿಗ್ರಹ ಸಾಮರ್ಥಯ ಮತ್ತಷ್ಟು ಬಲಿಷ್ಠವಾಗಿದೆ. ಬುಧವಾರ ರಾತ್ರಿ ಈ ಪರೀಕ್ಷಾರ್ಥ ಉಡವಾಣೆ ನಡೆಸಲಾಯಿತು. ಡಿಆರ್‌ಡಿಒ ಸಹಯೋಗದೊಂದಿಗೆ ಭಾರತೀಯ ಸೇನೆಯ ಕಾರ್ಯತಂತ್ರ ಕಮಾಂಡೊ ಪಡೆ(ಎಸ್‌ಎಫ್ಸಿ) ಈ ಉಡಾವಣೆ ಕೈಗೊಂಡಿತು. ಈ ಕ್ಷಿಪಣಿಯು 1,000-2,000 ಕಿ.ಮೀ. ವರೆಗಿನ ಗುರಿಯನ್ನು ಭೇದಿಸುವ ಸಾಮರ್ಥ್ಯ ಹೊಂದಿದೆ. “ಅಗ್ನಿ ಪ್ರೈಮ್‌’ ರಾತ್ರಿ ಉಡಾವಣೆಯನ್ನು ಯಶಸ್ವಿಯಾಗಿ ಕೈಗೊಂಡ ಎಸ್‌ಎಫ್ಸಿ ಮತ್ತು ಡಿಆರ್‌ಡಿಒಗೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅಭಿನಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next