ಮೂಡಬಿದಿರೆ: ಕಲ್ಲ ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿ ಗ್ರಾಮದ ಬಂಗೇರಪದವಿನಲ್ಲಿ ಚಿರತೆ ದಾಳಿಗೆ ಎರಡು ದನಗಳು ಮತ್ತು ಎರಡು ಕರುಗಳು ಬಲಿಯಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಬಂಗೇರಪದವಿನ ರಾಮಪ್ಪ ಗೌಡ ಅವರ ದನಕರುಗಳು ಚಿರತೆ ದಾಳಿಗೆ ಸಿಕ್ಕಿ ಬಲಿಯಾಗಿವೆ. ರಾಮಪ್ಪ ಗೌಡ ಅವರು ತಮ್ಮ ದನಕರುಗಳನ್ನು ಎಂದಿ ನಂತೆ ರವಿವಾರವೂ ಮೇಯಲು ಗುಡ್ಡಕ್ಕೆ ಬಿಟ್ಟಿದ್ದರು. ಯಾವತ್ತೂ ಸಂಜೆ ವೇಳೆಗೆ ಮನೆಗೆ ವಾಪಸಾಗುತ್ತಿದ್ದ ಗೋವುಗಳು ಅಂದು ಹಿಂದಿರುಗಿ ಬಂದಿರಲಿಲ್ಲ.
ಸೋಮವಾರ ಬೆಳಗ್ಗೆ ಗುಡ್ಡ ಪ್ರದೇಶ ದಲ್ಲಿ ಹುಡುಕಾಡಿದಾಗ ಮೂಲ್ಕಿ ಯದುನಾರಾಯಣ ಶೆಟ್ಟಿ ಅವ ರಿಗೆ ಸೇರಿರುವ ಬಂಗೇರಪದವಿನ ಬೋಂಟಲ್ಕೆ ಪ್ರದೇಶದ ರಬ್ಬರ್ ತೋಟ ದಲ್ಲಿ ಒಂದು ಕರುವಿನ ಹೊಟ್ಟೆಯ ಭಾಗ ಮತ್ತು ಒಂದು ಹಾಲು ಕರೆ ಯುವ ಹಸುವಿನ ಅರ್ಧ ತಿಂದು ಬಿಟ್ಟ ಕಳೇಬರ ಪತ್ತೆಯಾಯಿತು. ಇನ್ನೊಂದು ಕಡೆ ಗಬ್ಬದ ಹಸುವಿನ ಮೃತದೇಹ ಪತ್ತೆಯಾಗಿದ್ದು ಅದರ ಕುತ್ತಿಗೆಯ ಭಾಗದಲ್ಲಿ ಗಾಯಗಳಿದ್ದವು. ಇವುಗಳ ಜತೆ ಇದ್ದ ಮತ್ತೂಂದು ಕರು ಎಲ್ಲಿದೆ ಎಂದು ಪತ್ತೆಯಾಗಿಲ್ಲ.
ಮೂಡಬಿದಿರೆ ವಲಯಾರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಕಿನ್ನಿಗೋಳಿ ಘಟಕದ ಉಪ ವಲಯಾರಣ್ಯಾಧಿಕಾರಿ ಕೀರ್ತಿ ಮ್ಯಾಥ್ಯೂ ಮತ್ತು ಅರಣ್ಯ ರಕ್ಷಕ ಶಂಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಜೋಕಿಂ ಕೊರೆಯಾ, ರಾಮ ಗೌಡ, ಸ್ಥಳೀಯರಾದ ಪುರುಷೋತ್ತಮ ಗೌಡ, ಸುಭಾಷ್ ಮತ್ತಿತರರು ಸ್ಥಳದಲ್ಲಿದ್ದರು.
ಮರುಕಳಿಸುತ್ತಿರುವ ಪ್ರಕರಣ
ಕಲ್ಲಮುಂಡ್ಕೂರು, ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಿಂದೆಯೂ ಚಿರತೆಗಳ ದಾಳಿಗೆ ದನಗಳು ಬಲಿಯಾಗಿದ್ದವು. ಆಗ ಅರಣ್ಯಾಧಿ ಕಾರಿಗಳು ಚಿರತೆಗಳನ್ನು ಹಿಡಿಯಲು ಬೋನು ಇಟ್ಟಿದ್ದರೂ ಚಿರತೆ ಗಳನ್ನು ಸೆರೆ ಹಿಡಿಯಲು ಸಾಧ್ಯ ವಾಗಿರಲಿಲ್ಲ. ಇದೀಗ ಮತ್ತೆ ಈ ಪ್ರದೇಶ ದಲ್ಲಿ ಚಿರತೆ ಕಾಟ ಕಂಡಿದ್ದು ಹೈನು ಗಾರರು ಕಂಗಾಲಾಗಿದ್ದಾರೆ.