Advertisement

Vijayapura: ಸಿಡಿಲಿಗೆ ಗುಣಕಿ ಗ್ರಾಮದಲ್ಲಿ ಜೋಡೆತ್ತು ಬಲಿ

10:54 PM Mar 30, 2024 | Vishnudas Patil |

ವಿಜಯಪುರ : ಶನಿವಾರ ರಾತ್ರಿ ಬಿರುಗಾಳಿ ಸಹಿತ ಸಿಡಿಲು ಅಪ್ಪಳಿಸಿ ರೈತರೊಬ್ಬರ ಜೋಡೆತ್ತು ಬಲಿಯಾಗಿರುವ ಘಟನೆ ವಿಜಯಪುರ ತಾಲೂಕಿನ ಗುಣಕಿ ಗ್ರಾಮದಲ್ಲಿ ನಡೆದಿದೆ. ನಾನಾಗೌಡ ಮಲ್ಲಪ್ಪ ಬಿರಾದಾರ ಎಂಬ ರೈತರಿಗೆ ಸೇರಿದ ಜೋಡೆತ್ತು ಸಿಡಿಲಿಗೆ ಬಲಿಯಾಗಿವೆ.

Advertisement

ತೋಟದ ಮನೆಯ ಎದುರು ಕಟ್ಟಲಾಗಿದ್ದ ಜೋಡೆತ್ತಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿವೆ. ಕೃಷಿಗೆ ಆಸರೆಯಾಗಿದ್ದ ಜೋಡೆತ್ತುಗಳ ಸಾವಿನಿಂದ ರೈತ ನಾನಾಗೌಡ ಅವರಿಗೆ ಸುಮಾರು1.50 ಲಕ್ಷ ರೂ. ನಷ್ಟವಾಗಿದೆ. ಸುದ್ದಿ ತಿಳಿಯುತ್ತಲೇ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next