Advertisement

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

12:36 AM Apr 28, 2024 | Team Udayavani |

ಅಜೆಕಾರು: ಕೊಳವೆ ಬಾವಿ ಕೊರೆಯುವ ವಿಚಾರದಲ್ಲಿ ತಕರಾರು ಉಂಟಾಗಿ ಪರಸ್ಪರ ಮಾತಿನ ಚಕಮಕಿ ನಡೆದು, ಅವಾಚ್ಯ ಪದಗಳಿಂದ ನಿಂದಿಸಿ ಮಹಿಳೆಗೆ ತಂಡವೊಂದು ಹಲ್ಲೆ ನಡೆಸಿದ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಹೆಬ್ರಿ ತಾಲೂಕಿನ ಅಂಡಾರು ಗ್ರಾಮದ ನಿವಾಸಿ ಮುಕ್ತಾ ಅವರು ತಮ್ಮ ಜಮೀನಿನಲ್ಲಿ ಎ.27ರಂದು ಕೊಳವೆಬಾವಿ ಕೊರೆಸಲು ಮುಂದಾದಾಗ ಸಮೀಪದ ಕೃಷಿ ಭೂಮಿಯ ಶಂಕರ ಸೇರ್ವೇಗಾರ್‌ ಆಕ್ಷೇಪ ವ್ಯಕ್ತಪಡಿಸಿ, ತನ್ನ ಜಮೀನಿನಲ್ಲಿ ಈಗಾಗಲೇ ಕೊಳವೆ ಬಾವಿ ಕೊರೆಯಲಾಗಿದ್ದು ಅದರ ಪಕ್ಕದಲ್ಲಿ ಕೊಳವೆಬಾವಿ ತೋಡಿದರೆ ನೀರಿನ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿ ಕೊಳವೆ ಬಾವಿ ಬೇರೆಡೆ ಕೊರೆಯುವಂತೆ ಹೇಳಿದಾಗ ಪರಸ್ಪರ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಈ ವೇಳೆ ಮುಕ್ತಾರವರಿಗೆ ಶಂಕರ ಸೇರ್ವೆಗಾರ್‌, ಯಶೋದಾ, ಅಶೋಕ, ಮಹೇಶ, ಭಾರತಿ, ಆಶಾಲತಾ, ಸುರೇಶ್‌, ಸಚಿನ್‌, ದಯಾನಂದ, ಪ್ರದೀಪ್‌ ಮತ್ತಿತರರು ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಮುಕ್ತಾ ಅಜೆಕಾರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next