Advertisement

ನಿಡಶೇಸಿ ಶ್ರೀ ಚನ್ನಬಸವ ಶಿವಯೋಗಿಗಳ ವೈಭವದ ರಥೋತ್ಸವ

10:24 PM Feb 24, 2023 | Team Udayavani |

ಕುಷ್ಟಗಿ: ತಾಲೂಕಿನ ನಿಡಶೇಸಿ ಗ್ರಾಮದ ಶ್ರೀ ಚನ್ನಬಸವ ಶಿವಯೋಗಿಗಳ ಜಾತ್ರೆ ನಿಮಿತ್ಯ ಮಹಾ ರಥೋತ್ಸವ, ಶುಕ್ರವಾರ ಸಂಜೆ ವೈಭವದಿಂದ ಜರುಗಿತು.

Advertisement

ಶುಕ್ರವಾರ ಬೆಳಗ್ಗೆ ನಿಡಶೇಸಿ ಮಠದ ಆವರಣದಲ್ಲಿರುವ ಕರ್ತೃ ಗದ್ದುಗೆಗೆ ಅಭಿಷೇಕ, ಕಳಸಾರೋಹಣ ಧಾರ್ಮಿಕ ಕಾರ್ಯಗಳು ಜರುಗಿದವು. ನಂತರ ಅಡ್ಡಪಲ್ಲಕ್ಕಿಯಲ್ಲಿ ನಿಡಶೇಸಿ ಶ್ರೀ ಮಠದ ಲಿಂಗೈಕ್ಯ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಭಾವಚಿತ್ರ ಇಟ್ಟು ಮೆರವಣಿಗೆ ನಡೆಯಿತು. ಈ ಸಂಧರ್ಭದಲ್ಲಿ ಚಳಗೇರಿ ಬೃಹನ್ಮಠದ ಶ್ರೀ ವೀರಸಂಗಮೇಶ ಶಿವಾಚಾರ್ಯ ಸ್ವಾಮೀಜಿ, ಮಂಗಳೂರಿನ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ನಿಡಶೇಸಿಯ ಶ್ರೀ ಚನದನಬಸವ ಶಿವಾಚಾರ್ಯ ಸ್ವಾಮೀಜಿ, ಕಿರಿಯ ಶ್ರೀ ವಿಶ್ವಾರಾಧ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಮಠದ ಆವರಣದಲ್ಲಿ ಮಧ್ಯಾಹ್ನ 10 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.

ಸಂಜೆ ಶ್ರೀ ಮಠದ ಆವರಣದಿಂದ ಪಾದಗಟ್ಟೆಯವರೆಗೆ ಶ್ರೀ ಚನ್ನಬಸವ ಶಿನಯೋಗಿಗಳ ಮಹಾರಥೋತ್ಸವ ವೈಭದಿಂದ ಜರುಗಿತು. ಭಕ್ತಾಧಿಗಳು ರಥವನ್ನು ಎಳೆದು ಭಕ್ತಿ ಸೇವೆ ಸಲ್ಲಿಸಿದರು. ಸಾಗಿದ ರಥಕ್ಕೆ ಭಕ್ತಾಧಿಗಳು ಉತ್ತತ್ತಿ ಹಾರಿಸಿ ಧನ್ಯತಾಭಾವ ಸಮರ್ಪಿಸಿದರು. ಈ ಜಾತ್ರಾ ಮಹೋತ್ಸವದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ದ್ಯಾಮಣ್ಣ ಗುಡಳ್ಳಿ ದೊಡ್ಡಬಸವ ಬಯ್ಯಾಪೂರ, ಪಿಎಸೈ ಮೌನೇಶ ರಾಠೋಡ್, ಪಿಡಿಓ ಶ್ರೀಶೈಲ ಪೊಲೇಶಿ ಮತ್ತೀತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next