Advertisement

ಮೂವರು ಪ್ರತ್ಯೇಕತಾವಾದಿಗಳಿಗೆ 10 ದಿನಗಳ ಎನ್‌ಐಎ ಕಸ್ಟಡಿ

10:21 AM Jun 05, 2019 | Team Udayavani |

ಹೊಸದಿಲ್ಲಿ: ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ದುಖ್ತಾರನ್‌ -ಇ -ಮಿಲಾತ್‌ ಮುಖ್ಯಸ್ಥೆ ಆಸೀಯಾ ಅಂದ್ರಾಬಿ , ಪ್ರತ್ಯೇಕತಾವಾದಿ ನಾಯಕರಾದ ಮಸ್ರತ್‌ ಆಲಂ ಮತ್ತು ಶಬೀರ್‌ ಶಾ ಅವರನ್ನು ಅಧಿಕೃತವಾಗಿ ಬಂಧಿಸಲು ದೆಹಲಿ ಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ.ಮೂವರನ್ನೂ ಎನ್‌ಐಎ 10 ದಿನಗಳ ಕಸ್ಟಡಿಗೆ ಪಡೆದುಕೊಂಡಿದೆ.

Advertisement

ಮೂವರೂ ಇಡಿ ಮತ್ತು ಎನ್‌ಐಎ ತನಿಖೆ ಎದುರಿಸುತ್ತಿದ್ದು, ತಿಹಾರ್‌ ಜೈಲಿದಲ್ಲಿ ಇರಿಸಲಾಗುತ್ತಿದೆ.ತನಿಖಾ ತಂಡ 2017 ರಮೇ 30 ರಂದು ಮೂವರ ವಿರುದ್ಧ ಪ್ರಕರಣ ದಾಖಲು ಮಾಡಿತ್ತು.ಆಸೀಯಾ ಮತ್ತು ಶಬೀರ್‌ ಶಾ ಈಗಾಗಲೇ ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದರು.

ಲಷ್ಕರ್‌ ಇ ತೋಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಬಗ್ಗೆ ತಿಳಿದು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next