Advertisement

ಭಾರತದಲ್ಲಿ ಮಂದಿರ, ಮಸೀದಿ ಕಟ್ಟುವ ಸ್ವಾತಂತ್ರ್ಯವಿದೆ, ಜಗತ್ತಿನ ಹಲವೆಡೆ ಅಸಾಧ್ಯ: ಮಿಶ್ರಾ

05:21 PM Oct 12, 2021 | Team Udayavani |

ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯ ನೂತನ ಶಕೆ ಆರಂಭವಾಗಲು ಕಾರಣೀಭೂತರಾಗಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ)ದ ಮುಖ್ಯಸ್ಥ, ಸುಪ್ರೀಂಕೋರ್ಟ್ ಮಾಜಿ ಜಡ್ಜ್ ಅರುಣ್ ಮಿಶ್ರಾ ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ರಾಷ್ಟ್ರ ರಾಜಕಾರಣದಲ್ಲೇ ಮುಂದುವರೆಯುವೆ : ಸಂಸದ ಬಿ.ವೈ.ರಾಘವೇಂದ್ರ

ಎಮ್ ಎಚ್ ಆರ್ ಸಿಯ 28ನೇ ಸ್ಥಾಪಕ ವರ್ಷಾಚರಣೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಮಿಶ್ರಾ,ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಶಕೆ ಮತ್ತು ಶಾಂತಿ ನೆಲೆಸಲು ಶಾ ಅವರ ಅವಿರತ ಪ್ರಯತ್ನವನ್ನು ಶ್ಲಾಘಿಸಿದರು.

ಜಮ್ಮು-ಕಾಶ್ಮೀರದಲ್ಲಿ ನೂತನ ಶಕೆ ಆರಂಭವಾಗಲು ಕಾರಣಕರ್ತರಾದವರು ನೀವು ಮಿಸ್ಟರ್ ಶಾ ಎಂದು ಮಿಶ್ರಾ ಅವರು ಹೇಳಿದರು. ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಭಾರತದ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿತ್ತು. ಇದನ್ನು ನಾವು ಖಂಡಿಸಲೇಬೇಕಾಗಿತ್ತು ಎಂದು ಮಿಶ್ರಾ ಹೇಳಿದರು.

ಭಾರತ ಪ್ರತಿಯೊಂದು ಧರ್ಮದ ಸಾಮರಸ್ಯ ಕಾಪಾಡುತ್ತದೆ. ಈ ದೇಶದಲ್ಲಿ ಆಯಾ ಧರ್ಮದವರು ದೇವಸ್ಥಾನ ಅಥವಾ ಮಸೀದಿ ಅಥವಾ ಚರ್ಚ್ ಗಳನ್ನು ನಿರ್ಮಿಸುವ ಅಧಿಕಾರ ಹೊಂದಿದ್ದಾರೆ. ಆದರೆ ಜಗತ್ತಿನ ಹಲವು ದೇಶಗಳಲ್ಲಿ ಇಂತಹ ಸ್ವಾತಂತ್ರ್ಯ ಇಲ್ಲ ಎಂದು ಮಿಶ್ರಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next