Advertisement

ನೀರಚಿಲುಮೆ-ನಿಡಿಗಲ್‌ ರಸ್ತೆ ಕೆಸರುಮಯ

01:40 AM Aug 09, 2018 | Team Udayavani |

ಬೆಳ್ತಂಗಡಿ: ಮಳೆಗಾಲದಲ್ಲಿ ಕಚ್ಛಾ ರಸ್ತೆಗಳು ಹೇಳ ಹೆಸರಿಲ್ಲದಂತೆ ಮಾಯವಾಗಿಬಿಡುತ್ತವೆ. ವಾಹನ ಸವಾರರಿಗೆ, ಪಾದಚಾರಿಗಳಿಗೆ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ಸಾಹಸವಾಗಿ ಬಿಡುತ್ತದೆ. ಪ್ರಸ್ತುತ ಕಲ್ಮಂಜ ಗ್ರಾಮದ ನೀರಚಿಲುಮೆ- ಪಜಿರಡ್ಕ- ನಿಡಿಗಲ್‌ ರಸ್ತೆಯೂ ಕೆಸರುಮಯವಾಗಿದ್ದು, ಸಂಚಾರ ದುಸ್ತರವೆನಿಸಿದೆ. ಕಲ್ಮಂಜ ಗ್ರಾಮಸಭೆಯಲ್ಲಿ ಪ್ರತಿವರ್ಷವೂ ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಈ ಭಾಗದ ನಾಗರಿಕರು ಹೇಳುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆಯೂ ಇಲ್ಲದೆ, ಮಳೆನೀರು ರಸ್ತೆಯಲ್ಲಿಯೇ ಹರಿದು ಕೆಸರುಮಯವಾಗಿದೆ.

Advertisement

ಶಾಲಾ – ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವುದಕ್ಕೂ ಪರದಾಡಬೇಕಾದ ಸ್ಥಿತಿ ಇದೆ. ಸಂಗಮ ಕ್ಷೇತ್ರ ಪಜಿರಡ್ಕ ದೇವಸ್ಥಾನಕ್ಕೆ ತೆರಳುವುದಕ್ಕೂ ದಾರಿಯೂ ಇದೇ ಆಗಿದ್ದು, ಭಕ್ತರು ಪ್ರಯಾಣಿಸಲು ಕಷ್ಟ ಪಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಗ್ರಾಮೀಣ ಭಾಗದ ರಸ್ತೆಗಳಿಗೆ ಡಾಮರು ಭಾಗ್ಯ ಕರುಣಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next