Advertisement

ಸಿಎಎ ವಿರುದ್ಧ ದಂಗೆ: ನಕ್ಸಲರಿಂದ ಕರಪತ್ರ

11:00 AM Feb 27, 2020 | Hari Prasad |

ಕಣ್ಣೂರು: ಪೌರತ್ವ ಕಾಯ್ದೆ ವಿರುದ್ಧ ದಂಗೆ ಏಳುತ್ತೇವೆ ಎಂದು ಬರೆಯಲಾಗಿರುವ ಕರಪತ್ರಗಳು ಕೇರಳದ ಕಣ್ಣೂರಿನ ಅಂಬಯತೋಡ್‌ ಗ್ರಾಮದಲ್ಲಿ ಬುಧವಾರ ಪತ್ತೆಯಾಗಿವೆ. ಪಶ್ಚಿಮಘಟ್ಟ ವಿಶೇಷ ವಲಯ ಸಮಿತಿ, ಸಿಪಿಐ (ಮಾವೋವಾದಿ) ಎಂದು ಕರಪತ್ರಗಳ ಮೇಲೆ ನಮೂದಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಗಳಿಗೆ ಎಚ್ಚರಿಕೆ ನೀಡಲಾಗಿದೆ.

Advertisement

ಕೇರಳದಲ್ಲಿ ಸಿಎಎ ಜಾರಿಗೊಳಿಸಿದರೆ ದಲಿತರು, ಆದಿವಾಸಿಗಳು ಮತ್ತು ಮಾವೊವಾದಿ ಸಂಘಟನೆಗಳು ಒಟ್ಟಾಗಿ ದಂಗೆ ಏಳಬೇಕಾಗುತ್ತದೆ ಎಂದು ಬರೆಯಲಾಗಿದೆ. ಅದಲ್ಲದೇ, ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ), ಸೋಷಿಯಲ್‌ ಡೆಮಾಕ್ರಾ ಟಿಕ್‌ ಪಾರ್ಟಿ ಆಫ್ ಇಂಡಿಯಾದಂತಹ (ಎಸ್‌ಡಿಪಿಐ) ಮೂಲ ಭೂತವಾದಿ ಸಂಘಟನೆಗಳ ಕೋಮುವಾದಿ ಅಜೆಂಡಾಗಳಿಗೆ ಮರುಳಾಗಬೇಡಿ ಎಂದು ಕೂಡಾ ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next