Advertisement

2012ರ ಗುಂಡಿನ ದಾಳಿ ಪ್ರಕರಣದ ವಿಚಾರಣೆಗೆ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರಾದ ನಕ್ಸಲ್ ಶೋಭಾ

05:55 PM Aug 24, 2020 | sudhir |

ಶಿವಮೊಗ್ಗ : 2012ರಲ್ಲಿ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪ ನಡೆದ ಗುಂಡಿನ ದಾಳಿಗೆ ಸಂಬಂಧಿಸಿ ತಮಿಳುನಾಡು ಪೋಲೀಸರ ವಶದಲ್ಲಿದ್ದ ನಕ್ಸಲ್ ಶೋಭಾಳನ್ನು ಸೋಮವಾರ ವಿಚಾರಣೆಗಾಗಿ ತೀರ್ಥಹಳ್ಳಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Advertisement

2012ರಲ್ಲಿ ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಬರ್ಕಣ ಫಾಲ್ಸ್ ಬಳಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದ ವಿಚಾರಕ್ಕೆ ಸಂಬಂಧಿಸಿ ನಕ್ಸಲ್ ತಂಡದಲ್ಲಿದ್ದ ಹೊಸನಗರ ತಾಲೂಕಿನ ಮೇಲುಸಂಕದ ಶೋಭಾಳ ಮೇಲೆ ಎಫ್ ಐ ಆರ್ ದಾಖಲಾಗಿತ್ತು.

ಕಳೆದ ಮಾರ್ಚ್ ನಲ್ಲಿ ತಮಿಳುನಾಡು ಪೊಲೀಸರು ನಕ್ಸಲ್ ಶೋಭಾಳನ್ನು ಸೆರೆ ಹಿಡಿದಿದ್ದು ಕೊಯಂಬತ್ತೂರಿನ ಜೈಲಿನಲ್ಲಿ ಬಂಧಿಯಾಗಿದ್ದಳು ಇಂದು ನ್ಯಾಯಾಲಯದಲ್ಲಿ 2012ರಲ್ಲಿ ಆಗುಂಬೆಯಲ್ಲಿ ನಡೆದ ಗುಂಡಿನ ದಾಳಿಯ ಕುರಿತು ವಿಚಾರಣೆಗಾಗಿ ತಮಿಳುನಾಡು ಪೊಲೀಸರು ತೀರ್ಥಹಳ್ಳಿಗೆ ಕರೆತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next