Advertisement

Sonia Gandhi ವಿರುದ್ಧದ ಆರೋಪ ನಿರೂಪಿಸಿ: ಕಂಗನಾಗೆ ‘ಕೈ’ ಸವಾಲು

01:24 AM Sep 24, 2024 | Team Udayavani |

ಹೊಸದಿಲ್ಲಿ: “ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರಕಾರ ವಿಪತ್ತು ಸಾಲವನ್ನು ಪಡೆದು ಸೋನಿಯಾ ಗಾಂಧಿಯವರಿಗೆ ವರ್ಗಾಯಿಸಿದೆ’ ಎಂದ ಬಿಜೆಪಿ ಸಂಸದೆ ಕಂಗನಾ ರಣೌತ್‌ ಆರೋಪದ ವಿರುದ್ಧ ಕಾಂಗ್ರೆಸ್‌ ಸಿಡಿದೆದ್ದಿದೆ. ನಿಮ್ಮ ಆರೋಪವನ್ನು ಸಾಬೀತುಪಡಿಸಿ, ಇಲ್ಲವೆಂದಾದರೆ ಮಾನಹಾನಿ ಪ್ರಕರಣ ಎದುರಿಸಿ ಎಂದು ಸವಾಲು ಹಾಕಿದೆ.

Advertisement

ಕಂಗನಾ ತಾವು ಆರೋಪಿಸಿದಂತೆ ಸೋನಿಯಾರಿಗೆ 1 ರೂ. ಸಂದಾಯವಾಗಿದ್ದರೂ ಅದಕ್ಕೆ ದಾಖಲೆ ಕೊಡಲಿ, ಇಲ್ಲವಾ ದರೆ ಅವರ ಕ್ಷಮೆ ಯಾಚಿಸಲಿ ಎಂದು ಹಿಮಾಚಲ ಪ್ರದೇಶದ ಲೋಕೋಪಯೋಗಿ ಇಲಾಖೆ ಸಚಿವ ವಿಕ್ರಮಾದಿತ್ಯ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ. ಇಲ್ಲದಿದ್ದರೆ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ. ಇಂಥ ಹೇಳಿಕೆಗಳು ಬಿಜೆಪಿ ಸಂಸದರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next