Advertisement

ಮೋದಿ ಗೆಲುವಿಗೆ ನೇಕಾರ ಮಹಾಸಭಾ ಬೆಂಬಲಿಸಲಿ

02:58 PM Apr 20, 2019 | Team Udayavani |

ರಾಣಿಬೆನ್ನೂರ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ನೇಕಾರ ದಿನವೆಂದು ಘೋಷಣೆ ಮಾಡಿ ಸಮಾಜ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದು ನೇಕಾರ ಒಕ್ಕೂಟದ ಅಧ್ಯಕ್ಷ ಡಾ| ಬಸವರಾಜ ಕೇಲಗಾರ ಹೇಳಿದರು.

Advertisement

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀಗೆ ಸರ್ವಜನರ ಕಲ್ಯಾಣ ಬಯಸುವ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕೆಂದು ರಾಜ್ಯ ನೇಕಾರ ಮಹಾಸಭಾ ಅವರನ್ನು ಬೆಂಬಲಿಸಬೇಕು ಎಂದರು.

ಪ್ರಧಾನಿ ಅವರ ಸಾಧನೆ ಗಮನಿಸಿ ಸಮಾಜದ ಎಲ್ಲ ಬಾಂಧವರು ಪ್ರತಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ ಅವರ ಕೈ ಬಲಪಡಿಸಬೇಕು. ವಿಶ್ವದಲ್ಲಿ ಭಾರತದ ಘನತೆ ಹೆಚ್ಚಿಸಿರುವ ಅವರು ಇನ್ನೊಮ್ಮೆ ಈ ದೇಶದ ಆಡಳಿತ ಚುಕ್ಕಾಣಿ ಹಿಡಿಯಬೇಕಾಗಿದೆ ಎಂದು ಸಮಾಜದ ಮತದಾರರಲ್ಲಿ ಮನವಿ ಮಾಡಿದರು.

ನೇಕಾರ ಮಹಾಸಭಾ ರಾಜ್ಯಾಧ್ಯಕ್ಷ ಬಿ.ಎಸ್‌. ಸೋಮಶೇಖರ, ಕಾರ್ಯದರ್ಶಿ ನವೀನ ಚಿಲ್ಲಾಳ, ಸಂಕಪ್ಪ ಮಾರನಾಳ, ಡಾ| ಎಚ್.ಕೆ. ಕದರಮಂಡಲಿಗಿ, ಬಸವರಾಜ ಲಕ್ಷೆ ್ಮೕಶ್ವರ, ವೆಂಕಟೇಶ ಏಕಬೂಟೆ, ಶಿವಾನಂದ ಬಾಗಾದಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next