Advertisement

ಕೆನೆಪದರ ಆದಾಯ ಮಿತಿ 15 ಲಕ್ಷ ರೂ.ಗೆ ಏರಿಸಲು ಆಗ್ರಹ

03:10 AM Jul 22, 2020 | Hari Prasad |

ಹೊಸದಿಲ್ಲಿ: ಹಿಂದುಳಿದ ವರ್ಗಕ್ಕೆ ಮೀಸಲಾತಿ ಅವಕಾಶ ಕಲ್ಪಿಸುವ ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ.

Advertisement

ಈ ನಡುವೆ ವಾರ್ಷಿಕ ಆದಾಯ ಮಿತಿಯನ್ನು 15 ಲಕ್ಷ ರೂ.ಗೆ ಏರಿಸುವಂತೆ ಬಿಜೆಪಿ ಒಬಿಸಿ ಸಂಸದರ ವಲಯದಲ್ಲಿ ಆಗ್ರಹ ಕೇಳಿಬಂದಿದೆ.

ಒಬಿಸಿ ಕಲ್ಯಾಣ ಸಂಬಂಧಿತ ಸಂಸದೀಯ ಮಂಡಳಿ ಅಧ್ಯಕ್ಷ, ಸಂಸದ ಗಣೇಶ್‌ ಸಿಂಗ್‌ ಈ ಕುರಿತು ಜು.5ರಂದು ಬಿಜೆಪಿಯ ಉಭಯ ಸದನಗಳ 112 ಒಬಿಸಿ ಸಂಸದರಿಗೆ ಪತ್ರ ಬರೆದಿದ್ದಾರೆ.

‘ಕೆನೆ ಪದರ ವಾರ್ಷಿಕ ಆದಾಯದ ಮಿತಿಯನ್ನು 12 ಲಕ್ಷಕ್ಕೆ ಏರಿಸುವ ಚಿಂತನೆಯಲ್ಲಿ ಸಂಬಳ ಮತ್ತು ಕೃಷಿ ಆದಾಯವನ್ನೂ ಸೇರಿಸಲಾಗುತ್ತಿದೆ. ಇದು ಸರಿಯಲ್ಲ’ ಎಂದು ಸಿಂಗ್‌ ಹೇಳಿದ್ದಾರೆ.

ಈ ಕುರಿತು ಪ್ರಧಾನ ಮಂತ್ರಿ, ಗೃಹಸಚಿವರಿಗೆ ಟ್ವೀಟ್‌ ಹಾಗೂ ಪತ್ರ ಸಂದೇಶಗಳ ಮೂಲಕ ಆಗ್ರಹಿಸಿ ಎಂದು ಸಂಸದರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

Advertisement

ಕೆನೆಪದರ ಆದಾಯ ಮಿತಿ ಹೆಚ್ಚಿಸುವ ಸಂಬಂಧ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಪರಿಶೀಲನೆ ಕೈಗೆತ್ತಿಕೊಂಡಿದ್ದು, ಈ ನಡುವೆ ಬಿಜೆಪಿ ಒಬಿಸಿ ಸದಸ್ಯರ ಪತ್ರ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next