Advertisement

RSS ಎಲ್ಲಿರುತ್ತದೆಯೋ ಅಲ್ಲಿ ಒಳ್ಳೆಯ ಕೆಲಸಗಳಾಗುತ್ತವೆ: ಎಚ್ ಡಿಕೆಗೆ ರವಿ ಕುಮಾರ್ ಟಾಂಗ್

05:05 PM Oct 05, 2021 | Team Udayavani |

ಬೆಂಗಳೂರು: ಆರ್ ಎಸ್ಎಸ್ ನವರು ಐಎಎಸ್ ಅಧಿಕಾರಿಗಳಾಗಿದ್ದಾರೆ ಎಂಬ ಎಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ತಿರುಗೇಟು ನೀಡಿದ್ದಾರೆ.

Advertisement

“ಎಚ್ ಡಿಕೆಯವರಿಗೆ ಒಂದು ಮಾತು ಹೇಳುತ್ತೇನೆ. ಆರ್ ಎಸ್ಎಸ್ ಆಡಳಿತ ನಡೆಸುವ ಸಂಸ್ಥೆಯಲ್ಲ, ಸೇವೆ ಮಾಡುವ ಸಂಸ್ಥೆ. ಕಾರ್ಯಕರ್ತರಿಗೆ ಸೇವೆ ಮನೋಭಾವ ಬೆಳೆಸುವ ಪ್ರಪಂಚದ ಪ್ರಮುಖ ಸಂಸ್ಥೆ. ಕುಮಾರಸ್ವಾಮಿ ಬಾಯಿ ಹರಕೆಯಿಂದ ಹಾಗೆಯೇ ಆಗಲಿ. ನಿಜಕ್ಕೂ ಆಗ ದೇಶಕ್ಕೆ ಒಳ್ಳೆದಾಗುತ್ತದೆ” ಎಂದು ರವಿ ಕುಮಾರ್ ಹೇಳಿದರು.

ಇದನ್ನೂ ಓದಿ:ಬಿಎಸ್‌ಪಿ ಸಿದ್ಧಾಂತ ಜನತೆಗೆ ತಿಳಿಸಿ: ಪುರುಷೋತ್ತಮ್‌

ಆರ್ ಎಸ್ಎಸ್ ಎಲ್ಲಿರುತ್ತದೆಯೋ ಅಲ್ಲಿ ಬಹಳ ಒಳ್ಳೆಯ ಕೆಲಸಗಳಾಗುತ್ತವೆ. ಆರ್ ಎಸ್ಎಸ್ ಇರುವುದರಿಂದಲೇ ದೇಶದಲ್ಲಿ ಒಳ್ಳೆಯ ಕೆಲಸಗಳಾಗುತ್ತಿವೆ. ಈ ಬಗ್ಗೆ ಕುಮಾರಸ್ವಾಮಿಯವರಿಗೆ ಅನುಮಾನವೇ ಬೇಡ ಎಂದರು.

ಕಾಶ್ಮೀರದಲ್ಲಿ 370 ನೇ ವಿಧಿ ಹೋಯ್ತು, ಭಯೋತ್ಪಾದನೆ‌ ನಿರ್ಮೂಲನೆಯಾಯ್ತು. ಎಚ್ ಡಿಕೆ ಹೇಳಿದ 4000 ಜನ ಅನ್ನೋದು ಬಹಳ ದೊಡ್ಡ ಸಂಖ್ಯೆ. ಕುಮಾರಸ್ವಾಮಿ ಬಾಯಿ ಹರಕೆಯಿಂದ ಅಷ್ಟು ಮಂದಿ ಆರ್ ಎಸ್ಎಸ್ ನವರು ಐಎಎಸ್ ಅಧಿಕಾರಿಗಳಾಗಲಿ. ಆದರೆ ತಾಲಿಬಾನಿಗಳು ಎನ್ನುವ ಸಿದ್ದರಾಮಯ್ಯ ಗೆ ತಲೆ ಕೆಟ್ಟಿದೆ. ಅವರನ್ನು ನಿಮ್ಹಾನ್ಸ್ ಗೆ ಸೇರಿಸಬೇಕು ಎಂದು ರವಿ ಕುಮಾರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next