Advertisement

ಎನ್‌.ಮಹೇಶ್‌ ರಾಜೀನಾಮೆ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಲಾಬಿ

09:43 AM Oct 12, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಬಿಎಸ್‌ಪಿ ಸಚಿವ ಎನ್‌.ಮಹೇಶ್‌ ರಾಜೀನಾಮೆ ಬೆನ್ನಲ್ಲೇ ಆ ಸ್ಥಾನಕ್ಕೆ ಯಾರು ಎಂಬ ಚರ್ಚೆಗಳು ಪ್ರಾರಂಭವಾಗಿವೆ. 

Advertisement

ಎನ್‌.ಮಹೇಶ್‌ ಅವರು ಜೆಡಿಎಸ್‌ ಕೋಟಾದಡಿ ಸಚಿವರಾಗಿದ್ದ ಕಾರಣ ಇದೀಗ ತೆರವಾಗಿರುವ ಸ್ಥಾನಕ್ಕೆ ಜೆಡಿಎಸ್‌ನಿಂದಲೇ
ಭರ್ತಿಯಾಗಬೇಕಿದೆ. ಈಗಾಗಲೇ ಜೆಡಿಎಸ್‌ ಒಂದು ಸ್ಥಾನ ಉಳಿಸಿಕೊಂಡಿದ್ದು, ಇದೀಗ ಎರಡು ಸ್ಥಾನ ಸಿಕ್ಕಂತಾಗಿದೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಸಮಾಧಾನಗೊಂಡಿದ್ದ ಎಚ್‌.ಕೆ.ಕುಮಾರಸ್ವಾಮಿ, ಕೃಷ್ಣಾರೆಡ್ಡಿ, ಬಸವರಾಜ ಹೊರಟ್ಟಿ,ಸಿರಾ ಸತ್ಯನಾರಾಯಣ, ಕೆ.ಶ್ರೀನಿವಾಸಗೌಡ ಅವರು ಎರಡು ಸ್ಥಾನಗಳಿಗೆ ಆಕಾಂಕ್ಷಿಗಳಾಗಿದ್ದಾರೆ. 

ಎನ್‌.ಮಹೇಶ್‌ ಅವರನ್ನು ದಲಿತ ಸಮುದಾಯದ ಕೋಟಾದಡಿ ತೆಗೆದುಕೊಂಡಿರುವುದರಿಂದ ಎಚ್‌.ಕೆ. ಕುಮಾರಸ್ವಾಮಿಯವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next