Advertisement

ಮುಸ್ಲಿಂ ಮೀಸಲಾತಿ ಶೇ. 8ಕ್ಕೆ ಹೆಚ್ಚಿಸಲು ಒತ್ತಾಯ

11:59 PM Oct 25, 2022 | Team Udayavani |

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯಕ್ಕೆ ರಾಜ್ಯ ಸರಕಾರವು ಪ್ರವರ್ಗ 2ಬಿ ನಲ್ಲಿ ನೀಡಿರುವ ಶೇ. 4ರ ಮೀಸಲಾತಿಯನ್ನು ಶೇ. 8ಕ್ಕೆ ಏರಿಸಲು ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಕರ್ನಾಟಕ ಮುಸ್ಲಿಂ ಯುನಿಟಿ ಸಂಘಟನೆಯು ಒತ್ತಾಯಿಸಿದೆ.

Advertisement

ಸಂಘಟನೆಯ ಸಂಚಾಲಕ ಜಬ್ಟಾರ್‌ ಕಲುºರ್ಗಿ ಮತ್ತು ಪತ್ರಕರ್ತ ಬಿ.ಎಂ. ಹನೀಫ್‌ ನೇತೃತ್ವದ ನಿಯೋಗವು ಮಂಗಳವಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರನ್ನು ನಗರದಲ್ಲಿ ಭೇಟಿ ಮಾಡಿ, ವಿಸ್ತ್ರತವಾದ ಮನವಿ ಪತ್ರವನ್ನು ನೀಡಿದರು.

ಮನವಿ ಪತ್ರವನ್ನು ಸ್ವೀಕರಿಸಿ, ನಿಯೋಗದ ಸದಸ್ಯರ ಜತೆ ಚರ್ಚೆ ನಡೆಸಿದ ಜಯಪ್ರಕಾಶ್‌ ಹೆಗ್ಡೆ ಅವರು, ತಾವು ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮುಸ್ಲಿಮರ ನಿಯೋಗವೊಂದು ಅಧಿಕೃತವಾಗಿ ಭೇಟಿಯಾಗಿ ಮನವಿ ಅರ್ಪಿಸಿದೆ. ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಮೌಲಾನಾ ಮೊಹಮದ್‌ ಯೂನುಸ್‌, ಶಾರದಾ ನಾಯ್ಕ್ , ಎಂ.ಎಲ್‌. ಸರ್ಕಾವಸ್‌ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next