Advertisement

ದೇವರಿಗೂ ಕರುಣೆ ಇಲ್ಲ! ಅಪಘಾತ-ಖ್ಯಾತ ಗಾಯಕನ ಪುಟ್ಟ ಮಗು ದುರ್ಮರಣ

06:46 PM Sep 25, 2018 | Sharanya Alva |

ತಿರುವನಂತಪುರಂ: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೇರಳದ ಪ್ರಸಿದ್ಧ ಗಾಯಕ ಬಾಲಭಾಸ್ಕರ ಅವರ ಎರಡು ವರ್ಷದ ಪುತ್ರಿ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದು, ಪತ್ನಿ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಸುಕಿನ ವೇಳೆ ಸಂಭವಿಸಿದೆ.

Advertisement

ದುರಂತವೆಂದರೆ, ಸುಮಾರು 15 ವರ್ಷಗಳ ಬಳಿಕ ಮಗಳು ಹುಟ್ಟಿದ್ದ ಖುಷಿಗೆ ದಂಪತಿ ತ್ರಿಶ್ಶೂರ್ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಕೇರಳದ ಖ್ಯಾತ ಗಾಯಕ, ಸಂಗೀತ ಸಂಯೋಜಕ ಬಾಲ ಭಾಸ್ಕರ ದಂಪತಿ ಮದುವೆಯಾಗಿ 15 ವರ್ಷಗಳ ನಂತರ ತೇಜಸ್ವಿನಿ ಬಾಲಾ ಜನಿಸಿದ್ದಳು ಎಂದು ಕುಟುಂಬದ ನಿಕಟ ಮೂಲಗಳು ತಿಳಿಸಿವೆ.

ಬೆಳಗ್ಗಿನ ಜಾವ ಕಾರು ತಿರುವನಂತಪುರಂ ಬಳಿ ಮರಕ್ಕೆ ಡಿಕ್ಕಿ ಹೊಡೆದುಬಿಟ್ಟಿದ್ದು. ಮಗು ಸ್ಥಳದಲ್ಲೇ ಮೃತಪಟ್ಟಿದ್ದರೆ, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next