Advertisement

ಗುರು ಪರಂಪರೆಗೆ ಸಂಗೀತ ಶಾಲೆ ಉತ್ತಮ ಉದಾಹರಣೆ

02:40 PM Feb 01, 2022 | Team Udayavani |

ಭಾಲ್ಕಿ: ನಿಜವಾದ ಗುರು ಪರಂಪರೆಯನ್ನು ಗುರುತಿಸುವುದು ಯಾವುದಾದರೂ ಇದ್ದರೆ ಅದು ಸಂಗೀತ ಶಾಲೆ ಮಾತ್ರ ಎಂದು ಹಿರೇಮಠ ಸಂಸ್ಥಾನ ಹಿರಿಯ ಸ್ವಾಮೀಜಿ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ಪಟ್ಟಣದ ಚನ್ನಬಸವಾಶ್ರಮದಲ್ಲಿ ಸೃಷ್ಠಿ ಸಂಗೀತ ವಿದ್ಯಾಲಯದ 13ನೇ ವಾರ್ಷಿಕೋತ್ಸವ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಮಾನ್ಯ ಯೋಜನೆಯಡಿ ನಡೆದ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುರುಗಳನ್ನು ಹೆಚ್ಚಿಗೆ ಪ್ರೀತಿಸುವ ಕ್ಷೇತ್ರ ಸಂಗೀತ ಕ್ಷೇತ್ರವಾಗಿದೆ. ಸಂಗೀತ ಕ್ಷೇತ್ರದಲ್ಲಿ ಗುರುಗಳನ್ನು ಆರಾಧಿ ಸಿ, ಸಂಗೀತ ಕಲಿಯುವುದರಿಂದ ಸಂಗೀತದಲ್ಲಿ ತುಂಬಾ ಪರಿಣತಿ ಹೊಂದುವರು. ಸಂಗೀತವು ದೇವ ವಾಣಿಯಾಗಿದೆ ಎಂದು ಹೇಳಿದರು.

ನಿರಂಜನ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಚಂದ್ರಕಾಂತ ಕಿರಲೋಸಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಾಲಾಜಿ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಶಿವಾಜಿ ಸಗರ, ಉಸ್ತಾದ ಶೇಖ್‌ ಹನ್ನುಮಿಯಾ ಅವರು ಸುಗಮ ಸಂಗೀತ ನಡೆಸಿಕೊಟ್ಟರು. ವಿನಾಯಕ ಚೌಧರಿ, ಸಂಗಮೇಶ ಡೊಣಗಾಪುರ, ಕಮಲಾಕರ ಕುಲಕರ್ಣಿ, ಕಪಿಲ ಸೂರ್ಯವಂಶಿ, ಕೇಶವರಾವ ಗುರೂಜಿ, ಹಣಮಂತ ಚಿದ್ರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next