Advertisement

ಕೊಲೆ ಆರೋಪಿಗಳ ಬಂಧನ

04:59 PM Jun 14, 2021 | Team Udayavani |

ಕೆರೂರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಸೇರಿ ವ್ಯಕ್ತಿಯೊಬ್ಬನನ್ನು ದೊಣ್ಣೆಗಳಿಂದ ಹೊಡೆದು ಕೊಲೆಗೈಯ್ದ ಪ್ರಕರಣ ಸಮೀಪದ ನರೇನೂರ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

Advertisement

ಲಕ್ಷ್ಮಣ ಹನಮಂತ ವಡ್ಡರ (45) ಕೊಲೆಯಾದ ವ್ಯಕ್ತಿ. ಈತನಿಗೆ ಅದೇ ನರೇನೂರ ಗ್ರಾಮದ ರೇಣುಕಾ ಮಾನಪ್ಪ ಬೆಳಗಂಟಿ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈಚೆಗೆ ರಾಜಿ ಪಂಚಾಯ್ತಿಯಲ್ಲಿ ಅನೈತಿಕ ಸಂಬಂಧ ಇತ್ಯರ್ಥಪಡಿಸಿದ್ದರೂ ಲಕ್ಷ್ಮಣ ಪೀಡಿಸುವುದನ್ನು ಬಿಟ್ಟಿದ್ದಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಕುಪಿತರಾದ ಆಕೆಯ ಸಂಬಂಧಿ ಕರಾದ ಸಂಜೂ ಯಮನಪ್ಪ ಚಿಕ್ಕೂರ, ಯಮನಪ್ಪ ರುದ್ರಪ್ಪ ಚಿಕ್ಕೂರ, ರೇಣುಕಾ ಬೆಳಗಂಟಿ ಹಾಗೂ ಮಂಜಪ್ಪ ಯಮನಪ್ಪ ಚಿಕ್ಕೂರ, ವಿಠ್ಠಲ ಯಮನಪ್ಪ ಚಿಕ್ಕೂರ ಇವರೆಲ್ಲ ಸೇರಿ ತಮ್ಮ ಜಮೀನಿನ ಬಳಿ ಕುರಿ ಮೇಯಿಸಲು ಬಂದ ಲಕ್ಷ್ಮಣ ವಡ್ಡರನಿಗೆ ದೊಣ್ಣೆ (ಬಡಿಗೆ)ಯಿಂದ ಹೊಡೆದಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಮೃತನ ಪತ್ನಿ ರೇಣುಕಾ ಲಕ್ಷ್ಮಣ ವಡ್ಡರ ಕೆರೂರ ಠಾಣೆಗೆ ನೀಡಿದ್ದಾರೆ.

ಈ ಕುರಿತು ತನಿಖೆ ಕೈಗೊಂಡ ಪೊಲೀಸ್‌ ಅ ಧಿಕಾರಿಗಳು ಆರೋಪಿಗಳಾದ ಸಂಜೂ ಚಿಕ್ಕೂರ, ಯಮನಪ್ಪ ಚಿಕ್ಕೂರ, ರೇಣುಕಾ ಬೆಳಗಂಟಿ ಅವರನ್ನು ಬಂಧಿ ಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಲೋಕೇಶ ಜಗಲಾಸರ, ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ರಮೇಶ ಹಾನಾಪೂರ, ಪಿಎಸ್‌ಐ ಆರ್‌.ವೈ. ಜಲಗೇರಿ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next