Advertisement

ಯುಗಾದಿಗೆ ಮುರಳಿ ಹೊಸ ಚಿತ್ರ

09:00 PM Mar 09, 2018 | Team Udayavani |

ಮುರಳಿ ನಟಿಸಿರುವ “ಮಫ್ತಿ’ ಚಿತ್ರ ಬಿಡುಗಡೆಯಾಗಿ ಮೂರು ತಿಂಗಳು ಕಳೆದಿದೆ. ಸಹಜವಾಗಿಯೇ ಸಿನಿಪ್ರೇಮಿಗಳಲ್ಲಿ ಮುರುಳಿ ಮುಂದೆ ಯಾವ ಸಿನಿಮಾ ಮಾಡುತ್ತಾರೆ, ಯಾವ ನಿರ್ದೇಶಕರ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಕುತೂಹಲವಿದೆ. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಮುರುಳಿ ಹೊಸ ಸಿನಿಮಾ ಯುಗಾದಿ ಹಬ್ಬದಂದು ಅನೌನ್ಸ್‌ ಆಗುತ್ತಿದೆ. ಯಾರು ಈ ಸಿನಿಮಾವನ್ನು ನಿರ್ದೇಶಿಸುತ್ತಾರೆಂಬ ಪ್ರಶ್ನೆಗೆ ಸದ್ಯಕ್ಕೆ ಸ್ಪಷ್ಟ ಉತ್ತರವಿಲ್ಲ.

Advertisement

ಈಗಾಗಲೇ ಯೋಗಿ ಜಿ ರಾಜ್‌ ಹಾಗೂ ಚೇತನ್‌ ಕುಮಾರ್‌ ಇಬ್ಬರೂ ಮುರಳಿಗೆ ಒಂದೊಂದು ಕಥೆ ಹೇಳಿದ್ದಾರೆ. ಇಬ್ಬರ ಕಥೆಗಳನ್ನು ಮುರಳಿ ಇಷ್ಟಪಟ್ಟಿದ್ದಾರೆನ್ನಲಾಗಿದ್ದು, ಆ ಪೈಕಿ ಯಾರ ಸಿನಿಮಾ ಮೊದಲು ಸೆಟ್ಟೇರುತ್ತದೆ ಎಂಬ ಕುತೂಹಲವಿದೆ. ಚೇತನ್‌, ಮುರಳಿಗೆ ಡಿಸೆಂಬರ್‌ನಲ್ಲೇ ಕಥೆ ಹೇಳಿದ್ದರಂತೆ. ಇನ್ನು “ಮಫ್ತಿ’ ಬಿಡುಗಡೆಗೆ ಮುನ್ನವೇ ಯೋಗಿ, ಮುರಳಿಗೆ ಒಂದು ಕಥೆ ಹೇಳಿದ್ದರಂತೆ.

ಈ ಎರಡೂ ಕಥೆಗಳನ್ನು ಕೇಳಿರುವ ಮುರಳಿ ಇನ್ನು ಕೆಲವೇ ದಿನಗಳಲ್ಲಿ ಒಂದು ಕಥೆಯನ್ನು ಫೈನಲ್‌ ಮಾಡಲಿದ್ದಾರೆ. ಯೋಗಿ ಹೇಳಿರುವ ಕಥೆಯನ್ನು ಹೊಂಬಾಳೆ ಪ್ರೊಡಕ್ಷನ್ಸ್‌ ನಿರ್ಮಿಸುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಚೇತನ್‌ ಕಥೆಯನ್ನು ಯಾವ ನಿರ್ಮಾಪಕರು ನಿರ್ಮಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಹೊಂಬಾಳೆ ಪ್ರೊಡಕ್ಷನ್ಸ್‌ ಸಂಸ್ಥೆಯೇ ಈ ಚಿತ್ರವನ್ನು ನಿರ್ಮಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.

ವರ್ಷಕ್ಕೆ ಎರಡು ಸಿನಿಮಾ ಮಾಡುವ ಆಲೋಚನೆ ಮುರುಳಿಯವರಿಗಿದ್ದು, ಚೇತನ್‌ ಸಿನಿಮಾ ಮುಗಿಸಿಕೊಂಡು ಮತ್ತೂಂದು ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ. “ಬಂಗಾರ ಸನ್‌ಆಫ್ ಬಂಗಾರದ ಮನುಷ್ಯ’ ಸಿನಿಮಾ ಮಾಡಿದ್ದ ಯೋಗಿ ಜಿ ರಾಜ್‌ ಅವರ ಜೊತೆಯೂ ಮುರುಳಿ ಸಿನಿಮಾ ಮಾಡುವ ಸಾಧ್ಯತೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next