Advertisement

ಪ್ರಕಾಶ್‌ ರೈ ಬಾಯಿ ಬಚ್ಚಲು; ಕಿಡಿ ಕಾರಿದ ಮುಖ್ಯಮಂತ್ರಿ ಚಂದ್ರು 

02:04 PM Jun 05, 2018 | Team Udayavani |

ತುಮಕೂರು: ರಜನಿಕಾಂತ್‌ ಅವರ ಕಾಲ ಚಿತ್ರದ ಪರವಹಿಸಿ ಮಾತನಾಡಿದ ನಟ ಪ್ರಕಾಶ್‌ ರೈ ವಿರುದ್ಧ  ಹಿರಿಯ ನಟ, ಕಾಂಗ್ರೆಸ್‌ ನಾಯಕ ಮುಖ್ಯಮಂತ್ರಿ ಚಂದ್ರು ಕಿಡಿ ಕಾರಿದ್ದಾರೆ. 

Advertisement

ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಮಪ್ಪ ಅವರ ಪರ ಪ್ರಚಾರ ನಿರತರಾಗಿದ್ದ ವೇಳೆ ಚಂದ್ರು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

ಪ್ರಕಾಶ್‌ ರೈ ಅವರ ಬಾಯಿ ಬಚ್ಚಲು. ಪ್ರಚಾರಕ್ಕಾಗಿ ಸಂಧರ್ಭಕ್ಕನುಗುಣವಾಗಿ ಮಾತನಾಡುತ್ತಾರೆ ಎಂದು ನೇರ ವಾಗ್‌ಧಾಳಿ ನಡೆಸಿದರು. 

ನಾಡು ನುಡಿಯ ವಿಚಾರದಲ್ಲಿ ನಾನು ಕಠಿಣ ಹೃದಯಿಯಾಗಿದ್ದು, ಆತ್ಮೀಯರಾದರೂ ಅವರ ವಿರುದ್ಧ ಧ್ವನಿ ಎತ್ತುತ್ತೇನೆ ಎಂದರು. 

ರಾಜ್ಯದ ಹಿತ ಮುಖ್ಯವಾದರೆ ವಿತರಕರು ಈ ಸಿನಿಮಾ ತೆಗೆದುಕೊಳ್ಳಬಾರದು.ಚಿತ್ರ ತೆಗದುಕೊಂಡರೆ ಅನಾಹುತಕ್ಕೆ ಕಾರಣವಾಗುತ್ತದೆ. ನಾವು ದಂಗೆ ಏಳುತ್ತೇವೆ ಎಂದು ಕಿಡಿ ಕಾರಿದರು. 

Advertisement

ಪುಟಗೋಸಿ ಮರ್ಯಾದೆ ಕಾಪಾಡುತ್ತದೆ
ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ಜೆಡಿಎಸ್‌ ಪಕ್ಷವನ್ನು ಪುಟಗೋಸಿಗೆ ಹೋಲಿಕೆ ಮಾಡಿದ ಕುರಿತಾಗಿ ಪ್ರತಿಕ್ರಿಯಿಸಿ ಪುಟಗೋಸಿ ಮರ್ಯಾದೆ ಕಾಪಾಡುವ ವಸ್ತು . ಬಿಜೆಪಿಯಿಂದ ಪುಟಗೋಸಿಗೆ ಅವಮಾನವಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next