Advertisement

ಮುದ್ರಾಡಿ: ವಿಶೇಷ ಗ್ರಾಮಸಭೆ

01:00 AM Jan 20, 2019 | Team Udayavani |

ಹೆಬ್ರಿ: ಮುದ್ರಾಡಿ ಗ್ರಾಮ ಪಂಚಾಯತ್‌ನಲ್ಲಿ  ಮಂಗನ ಕಾಯಿಲೆ ಕುರಿತು ವಿಶೇಷ  ಸಭೆ  ಜ.19ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ  ಶಶಿಕಲಾ ಡಿ. ಪೂಜಾರಿ ವಹಿಸಿದ್ದರು.

Advertisement

ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ನರಸಿಂಹ ನಾಯಕ್‌ ಅವರು ಮಂಗನ ಕಾಯಿಲೆ ಕುರಿತು ಸಮಗ್ರವಾದ ಮಾಹಿತಿಯನ್ನು ಒದಗಿಸಿದರು.  ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ  ರಾಘವೇಂದ್ರ ನಾಯ್ಕ, ಹಿರಿಯ ಪಶುವೈದ್ಯಕೀಯ ಪರಿವೀಕ್ಷಕ ಶೇಖರ ನಾಯ್ಕ, ಗ್ರಾ.ಪಂ. ಸದಸ್ಯರಾದ ಶುಭದರ ಶೆಟ್ಟಿ,  ವಿಶುಕುಮಾರ್‌, ವಸಂತಿ, ಕಾರ್ಯದರ್ಶಿ ಸದಾಶಿವ, ಗ್ರಾಮಕರಣಿಕ ನವೀನ್‌, ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಶಾಲಾ ಮುಖ್ಯ ಶಿಕ್ಷಕಿ  ಅಂಬುಜಾಕ್ಷಿ, ಶಿಕ್ಷಕ  ರಾಮ ಬಿ. ಮೊದಲಾದವರು ಉಪಸ್ಥಿತರಿದ್ದರು. 

ಗ್ರಾಮ  ಪಂಚಾಯತ್‌ ಸದಸ್ಯ ಸಂತೋಷ ಕುಮಾರ್‌ ಶೆಟ್ಟಿ  ಅವರು ಸ್ವಾಗತಿಸಿ,  ಗ್ರಾಮ ಪಂಚಾಯತ್‌ ಗುಮಾಸ್ತ ಪದ್ಮನಾಭ ಕುಲಾಲ್‌  ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next