Advertisement

Mudhol: ಬಾಕಿ ಹಣ ನೀಡುವಂತೆ ರೈತರ ಮನವಿ

01:18 PM Aug 25, 2024 | Team Udayavani |

ಮುಧೋಳ: 2022ನೇ ಸಾಲಿನ ಹೆಚ್ಚವರಿ 62 ರೂ. ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಶೀಘ್ರವೇ ಬಾಕಿ‌ ನೀಡಬೇಕು ಎಂದು ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರು ಒಕ್ಕೊರಲಿನಿಂದ ಕಾರ್ಖಾನೆ‌ ಮಾಲೀಕರಲ್ಲಿ ಮನವಿ‌ ಮಾಡಿಕೊಂಡರು.

Advertisement

ನಗರದ ಜಿಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ನಡೆದ ರೈತರ ಸಭೆಯಲ್ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆ ಮಾತ್ರ 62ರೂ. ಬಾಕಿಯನ್ನು ಪಾವತ್ತಿಸಿದ್ದು ಇನ್ನುಳಿದ ಕಾರ್ಖಾನೆಗಳೂ ಸಹ ಶೀಘ್ರವಾಗಿ ಬಾಕಿಯನ್ನು ನೀಡಬೇಕು‌ ಎಂದು ಸಭೆಯಲ್ಲಿ‌ ತಿಳಿಸಿದರು.

ಆ ಬಳಿಕ ಹಲವು ಕಾರ್ಖಾನೆಗಳಿಗೆ ಭೇಟಿ ನೀಡಿದ ರೈತರು ಅಲ್ಲಿನ ಆಡಳಿತ ಮಂಡಳಿ‌ ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಬಾಕಿ ಪಾವತಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ‌ ಮಾಡಿಕೊಂಡರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ಕಬ್ಬು ಬೆಳೆಗಾರರ ಸಂಘದ ತಾಕೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಜಿ. ಪಂ.‌ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಮಹೇಶಗೌಡ ಪಾಟೀಲ, ಸುಭಾಷ ಶಿರಬೂರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next