Advertisement

ಕಾರ್ಮಿಕರ ಕೈ ಹಿಡಿದ ಉದ್ಯೋಗ ಖಾತ್ರಿ

12:30 PM May 28, 2020 | Naveen |

ಮುದಗಲ್ಲ: ಹರಡುತ್ತಿರುವ ಕೋವಿಡ್ ವೈರಸ್‌ ಪರಿಣಾಮ ಉದ್ಯೋಗವಿಲ್ಲದೆ ಮನೆ ಸೇರಿದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಕೈ ಹಿಡಿದಿದೆ. ಕನ್ನಾಳ ಮತ್ತು ತಲೇಖಾನ ಗ್ರಾಪಂ ವ್ಯಾಪ್ತಿಯಲ್ಲಿ ಬದು ನಿರ್ಮಾಣ, ಕೆರೆ ಹೂಳೆತ್ತುವುದು, ಕೃಷಿ ಹೊಂಡ, ಜಾನುವಾರು ದೊಡ್ಡಿ ನಿರ್ಮಾಣದಂತಹ ವೈಯಕ್ತಿಕ ಕಾಮಗಾರಿಗಳು ಭರದಿಂದ ನಡೆದಿವೆ. ಕನ್ನಾಳ ಗ್ರಾಪಂದಲ್ಲಿ 1200 ಹಾಗೂ ತಲೇಖಾನ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 1100 ಉದ್ಯೋಗ ಚೀಟಿಗಳಿವೆ.

Advertisement

ಒಂದು ಕುಟುಂಬಕ್ಕೆ 100ದಿನ ಕೆಲಸ ನೀಡಲಾಗುತ್ತಿದ್ದು, ಪುರುಷ ಮತ್ತು ಮಹಿಳೆಯರಿಗೆ 275 ರೂ. ಸಮಾನ ಕೂಲಿ ನೀಡಲಾಗುತ್ತಿದೆ. ಸುಮಾರು 300ಕ್ಕೂ ಹೆಚ್ಚು ಕಾಮಗಾರಿಗಳನ್ನು ನೋಂದಣಿ ಮಾಡಲಾಗಿದೆ. ಬೆಳಗ್ಗೆ 8:00ರಿಂದ ಮಧ್ಯಾಹ್ನ 12:00ರಿಂದ 1:00ರ ವರೆಗೆ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಸಾಮಾಜಿಕ ಅಂತರ, ಮುಖಗವಸು ಬಳಸಲು ಸೂಚಿಸಲಾಗಿದೆ ಎಂದು ಗ್ರಾಪಂ ಮೂಲಗಳು ತಿಳಿಸಿವೆ. ತಿಂಗಳಲ್ಲಿಯೇ ಸುಮಾರು 15 ಲಕ್ಷ ರೂ. ಕೂಲಿ ಹಣ ಪಾವತಿಸಲಾಗಿದೆ ಎಂದು ಕನ್ನಾಳ ಗ್ರಾಪಂ ಅಧ್ಯಕ್ಷ ತಿಪ್ಪಣ್ಣ ರಾಠೊಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next