Advertisement

ದುರಹಂಕಾರಿ ಸಚಿವರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ: ರೇಣುಕಾಚಾರ್ಯ

11:10 PM Jan 30, 2022 | Team Udayavani |

ಹೊನ್ನಾಳಿ: ವಿಧಾನಸಭಾ ಕ್ಷೇತ್ರದ ಕೆಲಸ, ಸಮಸ್ಯೆ, ಅಹವಾಲು ಬಗ್ಗೆ ದೂರವಾಣಿ ಕರೆ ಮಾಡಿದರೂ ಸಚಿವರು ಕರೆ ಸ್ವೀಕರಿಸುತ್ತಿಲ್ಲ. ಸಚಿವರು ಅದೇ ಧೋರಣೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಅಂತಹ 15 ಸಚಿವರ ಹೆಸರುಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

Advertisement

ಹೊನ್ನಾಳಿ ಹರಗನಹಳ್ಳಿ ಕ್ಯಾಂಪ್‌ನಲ್ಲಿ ರವಿವಾರ ಮಾತನಾಡಿದ ಅವರು, ಬಿಜೆಪಿಯ ತಣ್ತೀಮತ್ತು ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಂದಂತಹ ವ್ಯಕ್ತಿ ನಾನು. ವ್ಯವಸ್ಥೆ ಸರಿಯಾಗಬೇಕೆನ್ನುವುದು ನನ್ನ ಮೂಲ ಉದ್ದೇಶ ಮತ್ತು ಕಳಕಳಿ. ಶಾಸಕರು ಸಚಿವರಿಗೆ ದೂರವಾಣಿ ಕರೆ ಮಾಡಿದರೂ ತೆಗೆದುಕೊಳ್ಳುತ್ತಿಲ್ಲ.

ಇದನ್ನೂ ಓದಿ:ಸೌದಿ ಅರೇಬಿಯಾದಲ್ಲಿ ಮೊದಲ ಯೋಗಾ ಉತ್ಸವ

ಕಳೆದ ವಾರ ಬೆಳಗಿನ ಸಮಯದಲ್ಲಿ ಒಬ್ಬ ಸಚಿವರಿಗೆ ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಅವರ ಆಪ್ತ ಕಾರ್ಯದರ್ಶಿ ಸಾರ್‌, ಸಾಹೇಬರಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಅವರು ವಿಶ್ರಾಂತಿಯಲ್ಲಿದ್ದಾರೆ ಎಂದರು. ಅದೇ ದಿನ ನಡೆದ ಸಚಿವ ಸಂಪುಟ ಸಭೆಯಲ್ಲಿ ಅವರು ಭಾಗವಹಿಸಿದ್ದರು ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next