Advertisement

ಮಧ್ಯಪ್ರದೇಶ ರೈತರಿಗೆ ದೊರಕಿದ್ದು 15,000 ರೂ. ಲಾಭ, 2 ಲಕ್ಷ ಅಲ್ಲ: ಬಿಜೆಪಿ

10:00 AM Jun 18, 2019 | Team Udayavani |

ಭೋಪಾಲ್‌ : ಮಧ್ಯ ಪ್ರದೇಶದ ಕೃಷಿ ಸಾಲ ಫ‌ಲಾನುಭವಿಗಳಲ್ಲಿ ಶೇ. 95 ಮಂದಿಗೆ ಕೇವಲ 15,000 ರೂ. ಲಾಭ ಸಿಕ್ಕಿದೆಯೇ ಹೊರತು ಆಳುವ ಕಾಂಗ್ರೆಸ್‌ ಪಕ್ಷ ಹೇಳಿರುವಂತೆ 2 ಲಕ್ಷ ರೂ ಅಲ್ಲ ಎಂದು ಬಿಜೆಪಿ ಹೇಳಿದೆ.

Advertisement

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರಕಾರದ ಕೃಷಿ ಸಾಲ ಮನ್ನಾ ಯೋಜನೆಯಡಿ ರಾಜ್ಯದ ಒಬ್ಬನೇ ಒಬ್ಬ ರೈತನಿಗೆ ಕೂಡ 2 ಲಕ್ಷ ರೂ. ಗಳ ಕೃಷಿ ಸಾಲ ಮನ್ನಾ ಲಾಭ ದೊರಕಿಲ್ಲ ಎಂದು ಬಿಜೆಪಿ ನಾಯಕ ನರೋತ್ತಮ ಮಿಶ್ರಾ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಹತ್ತು ದಿನಗಳ ಒಳಗೆ ರೈತರ ಕೃಷಿ ಸಾಲ ಮನ್ನಾ ಆಗದಿದ್ದರೆ ತಾನು ರಾಜ್ಯದ ಮುಖ್ಯಮಂತ್ರಿಯನ್ನೇ ಬದಲಾಯಿಸುವುದಾಗಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದರು ಎಂಬುದನ್ನು ಮಿಶ್ರಾ ನೆನಪಿಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next