Advertisement

ರಾಮಮಂದಿರಕ್ಕಾಗಿ ಆಂದೋಲನ

08:32 AM May 13, 2018 | Harsha Rao |

ಹರಿದ್ವಾರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಕುರಿತು ಕಾನೂನು ರಚಿಸುವ ಬಗ್ಗೆ ಸಂಸದರ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ದೇಶದಲ್ಲಿರುವ ಹಿಂದೂಗಳೆಲ್ಲ ಪ್ರತಿಭಟನೆ ನಡೆಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ)ನ ನೂತನ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣುಸದಾಶಿವ ಕೋಕೆj ಹೇಳಿದ್ದಾರೆ.

Advertisement

ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಮೊಕದ್ದಮೆಯಲ್ಲಿ ಹಿನ್ನಡೆಯಾದರೆ ಈ ಕ್ರಮ ಕೈಗೊಳ್ಳಲಾಗುವುದು. ಹರಿದ್ವಾರಕ್ಕೆ ಭೇಟಿ ನೀಡಿದ ಅವರು ಶನಿವಾರ ಈ ಮಾತುಗಳನ್ನಾಡಿದ್ದಾರೆ. ಮುಂದಿನ 6-7 ತಿಂಗಳ ಒಳಗಾಗಿ ಸುಪ್ರೀಂ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ತೀರ್ಪು ನೀಡಲಿದೆ. ಒಂದು ವೇಳೆ ತೀರ್ಪು ನಮ್ಮ ವಿರುದ್ಧ ಬಂದರೆ, ದೇಶಾದ್ಯಂತ ಇರುವ ಹಿಂದೂಗಳೆಲ್ಲ ಹೊಸದೊಂದು ಚಳವಳಿ ಆರಂಭಿಸಲಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಕಾನೂನು ತರುವಂತೆ ಸಂಸದರ ಮೇಲೆ ಒತ್ತಡ ತರಲಿದ್ದಾರೆ ಎಂದಿದ್ದಾರೆ ಕೋಕೆj.

Advertisement

Udayavani is now on Telegram. Click here to join our channel and stay updated with the latest news.

Next