Advertisement

ಮೂಡುಬಿದಿರೆ: ಆರೋಪಿಗಳ ಬಂಧನ

09:12 AM Aug 02, 2019 | Team Udayavani |

ಮೂಡುಬಿದಿರೆ: ಅಲಂಗಾರಿನ ಮುರಮೇಲಿನಲ್ಲಿ ಸರ ಕಳವು ಮತ್ತು ವಾಲ್ಪಾಡಿಯಲ್ಲಿ ಕಳವು ನಡೆಸಿದ್ದ ಆರೋಪದಲ್ಲಿ ಮೂಡುಮಾರ್ನಾಡು ಗ್ರಾಮದ ತಂಡ್ರಕೆರೆಯ ದಿನೇಶ್‌ ಪೂಜಾರಿ ಮತ್ತು ಕೃತ್ಯಕ್ಕೆ ಸಹಕರಿಸಿದ್ದ ಆರೋಪದಲ್ಲಿ ದರೆಗುಡ್ಡೆ ಜನತಾ ಕಾಲನಿಯ ಯೋಗೀಶ್‌ ಆಚಾರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿಗಳಿಂದ ಎರಡು ಬೈಕ್‌, 3 ಮೊಬೈಲ್‌ ಫೋನ್‌ಗಳು, 2 ಚಿನ್ನದ ಸರಗಳು, ಒಂದು ಜತೆ ಕಿವಿಯ ಆಭರಣ ಸಹಿತ ಒಟ್ಟು 1.73 ಲ. ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್‌ ಆಯುಕ್ತರ ನಿರ್ದೇಶನ ದಂತೆ ಮೂಡುಬಿದಿರೆ ಪ್ರಭಾರ ನಿರೀಕ್ಷಕ ಅನಂತಪದ್ಮನಾಭ, ಎಸ್‌ ಐಗಳಾದ ದೇಜಪ್ಪ, ಕೃಷ್ಣ ಸಹಿತ ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next