Advertisement

ಉತ್ತರಾಖಂಡದಲ್ಲಿ ಗುರುವಾರ ಪ್ರಧಾನಿ ಮೋದಿ ರಾಲಿ, ಸಾರ್ವಜನಿಕ ಭಾಷಣ

09:12 AM Mar 29, 2019 | Team Udayavani |

ಡೆಹರಾಡೂನ್‌ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಗುರುವಾರ ಉತ್ತರಾಖಂಡದ ಉಧಾಂಪುರ ಸಿಂಗ್‌ ನಗರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Advertisement

ಜಿಲ್ಲೆಯ ರುದ್ರಾಪುರ ನಗರದಲ್ಲಿ ಪ್ರಧಾನಿ ಮೋದಿ ಅವರು ಬೆಳಗ್ಗೆ 11 ಗಂಟೆಗೆ ರಾಲಿಯಲ್ಲಿ ಭಾಷಣ ಮಾಡುವರು ಎಂದು ಪ್ರದೇಶ ಬಿಜೆಪಿ ಕಾರ್ಯಾಧ್ಯಕ್ಷ ನರೇಶ್‌ ಬನ್ಸಾಲ್‌ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮಾಜಿ ಪ್ರದೇಶ ಬಿಜೆಪಿ ಕಾರ್ಯಾಧ್ಯಕ್ಷ ಅಜಯ್‌ ಭಟ್‌ ಅವನ್ನು ನೈನಿತಾಲ್‌ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಸಲಾಗಿರುವ ಪ್ರಯುಕ್ತ ನರೇಶ್‌ ಬನ್ಸಾಲ್‌ ಅವರು ಇಂದು ಬುಧವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದಾರೆ.

ಕಳೆದ ತಿಂಗಳಲ್ಲಿ ರುದ್ರಪುರದಲ್ಲಿ ನಡೆದಿದ್ದ ಶಂಖನಾದ ರಾಲಿಯಲ್ಲಿ ಭಾಷಣ ಮಾಡಲು ಮೋದಿ ಬಂದಿದ್ದರು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಕ್ರಮ ತಾಣಕ್ಕೆ ಹೋಗಲು ಅವರಿಗೆ ಸಾಧ್ಯವಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next