Advertisement

ಅರುಣಾಚಲ : ಶಾಸಕ ಸೇರಿ 6 ಮಂದಿ ಭೀಕರ ಹತ್ಯೆ

09:26 AM May 22, 2019 | Vishnu Das |

ಇಟಾನಗರ: ರಾಜ್ಯದಲ್ಲಿ ಮಂಗಳವಾರ ಬೆಳಗ್ಗೆ ನಾಗಾ ಬಂಡುಕೋರರು ಶಾಸಕ ಸೇರಿ 6 ಮಂದಿಯನ್ನು ಬರ್ಬರವಾಗಿ ಗುಂಡಿಕ್ಕಿ ಹತ್ಯೆಗೈದು ಅಟ್ಟಹಾಸ ಮೆರೆದಿದ್ದಾರೆ.

Advertisement

ಖೋನ್ಸಾ ಪಶ್ಚಿಮ ಕ್ಷೇತ್ರದಶಾಸಕ ತಿರೊಂಗ್‌ ಅಭೋ ಅವರನ್ನು ಹೊಂಚು ದಾಳಿ ಹತ್ಯೆಗೈಯಲಾಗಿದೆ. ತಿರಾಪ್‌ ಜಿಲ್ಲೆಯ ಖೋನ್ಸಾ ಸರ್ಕಲ್‌ ಬಳಿ ದಾಳಿ ನಡೆಸಲಾಗಿದೆಎಂದು ತಿಳಿದು ಬಂದಿದೆ.

ಅಭೋ ಅವರು ಎನ್‌ಪಿಪಿ ಪಕ್ಷದ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಗೆಸ್ಪರ್ಧಿಸಿದ್ದು, ಮೇ 23 ರಂದು ಫ‌ಲಿತಾಂಶ ಪ್ರಕಟವಾಗುವ ಮುನ್ನವೇ ಹತ್ಯೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next